Friday, March 14, 2025
HomeViral Videoಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video...
spot_img
spot_img
spot_img
spot_img
spot_img

ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಮಂಗಳೂರು : ಬೈಕ್ ಸವಾರನಿಗೆ ಗುದ್ದುವ ಬದಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು (Car) ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಮಹಿಳೆ ಕಂಪೌಂಡ್‌ಗೆ (compound) ಹಾಕಿದ ತಂತಿ (ಗ್ರಿಲ್) ಗೆ ಸಿಲುಕಿ ನೇತಾಡಿದ್ದಾರೆ. ಈ ದೃಶ್ಯ ನೋಡುಗರ ಎದೆ ಝಲ್ ಎನಿಸುವ ಭೀಕರ ಅಪಘಾತ ಮಂಗಳೂರು ನಗರದಲ್ಲಿ ನಡೆದಿದೆ.

ಮಂಗಳೂರು ನಗರದ ರಸ್ತೆಯಲ್ಲಿ ಮಹಿಳೆಯೋರ್ವಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಬೈಕ್ ಸವಾರನಾದ ಮುರಳಿ ಪ್ರಸಾದ್ (Murali Prasad) ಎನ್ನುವಾತ‌ ಅದೇ ರಸ್ತೆಯಲ್ಲಿ ತೆರಳುತ್ತಿದ್ದಾರೆ. ಆಗ ಕಾರೊಂದು ಬೈಕ್‌ ಸವಾರನಿಗೆ ಗುದ್ದಿ ಕೊಲೆ ಮಾಡುವ ಉದ್ದೇಶದಿಂದ ಬಂದಿದೆ. ಆದರೆ ಕಾರು ಬೈಕ್‌ ಸವಾರನ ಬದಲಿಗೆ ಮಹಿಳೆಗೆ ಕಾರು ಗುದ್ದಿದೆ.‌

ಇದನ್ನು ಓದಿ : ಮಹಿಳಾ PSI ಮೇಲೆ ಹಲ್ಲೆ ; ಹಲ್ಲೆಯ ವಿಡಿಯೋ ವೈರಲ್.!

ಕಾರು ಗುದ್ದಿದ ಪರಿಣಾಮ ಮಹಿಳೆ ಕಂಪೌಂಡ್‌ಗೆ ಹಾಕಿದ ತಂತಿಗೆ ಸಿಲುಕಿ (Caught in a wire) ನೇತಾಡಿದ್ದಾರೆ. ನೇತಾಡುತ್ತಿರುವ ಮಹಿಳೆಯನ್ನು ನೋಡಿ  ಸ್ಥಳೀಯರು ಓಡೋಡಿ ಬಂದು ರಕ್ಷಿಸಿದ್ದಾರೆ. ಸದ್ಯ ಅಪಘಾತದ ವಿಡಿಯೋ ವೈರಲ್‌ ಆಗಿದ್ದು, ಅಫಘಾತದ (Accident) ದೃಶ್ಯ ಭಯಾನಕವಾಗಿದೆ.

ಹೀಗೆ ಬೈಕ್‌ ಸವಾರನ ಬದಲಿಗೆ ಮಹಿಳೆಗೆ ಕಾರು ಗುದ್ದಿಸಿದ ಕಾರು ಚಾಲಕ ಸತೀಶ್ ಕುಮಾರ್​​ (Satish Kumar) ಎಂದು ತಿಳಿದು ಬಂದಿದ್ದು, ಸದ್ಯ ಅದೃಷ್ಟವಶಾತ್​ ಮಹಿಳೆ ಬದುಕಿದ್ದಾರೆ.

ಇದನ್ನು ನೋಡಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಮುರಳಿ ಪ್ರಸಾದ್ ಮತ್ತು ಸತೀಶ್ ಕುಮಾರ್​​ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಯಾವುದೋ ವಿಷಯಕ್ಕೆ ಅವರಿಬ್ಬರ ನಡುವೆ ತಕರಾರು (Dispute) ಇದ್ದು, ಇದೇ ವಿಚಾರಕ್ಕೆ ಹೇಗಾದರು ಮಾಡಿ ಮುರಳಿ ಪ್ರಸಾದ್​ನನ್ನು ಕೊಲ್ಲಲು ಸತೀಶ್ ಕುಮಾರ್​​ ಸ್ಕೆಚ್ (Sketch) ಹಾಕತ್ತಿದ್ದ.

ಅದರಂತೆ ನಿನ್ನೆ (ಮಾರ್ಚ್​ 13) ಮುರಳಿ ಪ್ರಸಾದ್​ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿದ ಸತೀಶ್ ಕುಮಾರ್, ಸಿಕ್ಕದ ಅವಕಾಶ ಉಪಯೋಗಿಸಲು ಮುರಳಿ ಪ್ರಸಾದ್​ ಬೈಕ್​ಗೆ (Bike) ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ. ಆದರೆ ಆತನ ವಿಫಲವಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ.

ಇದನ್ನು ನೋಡಿ : ಮನೆಗಾಗಿ ಮನವಿ ; ನೀ ಬಾ, ಇಲ್ಲಾ ನಿನ್ನ ಮಗಳನ್ನು ಕಳುಹಿಸು ಎಂದ ಗ್ರಾ.ಪಂ. Member.!

ಮಹಿಳೆ ಡಿಕ್ಕಿ ಹೊಡೆದ ಕಾರು ಚಾಲಕ (Car driver) ಸತೀಶ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದ್ದು, ಇತ್ತ ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ ಸಹ ಹಿಟ್ ಆಯಂಡ್​ ರನ್ ಕೇಸ್ ಬುಕ್ ಆಗಿದೆ.

ಏನೇ ಆದರು ಇಂತ ಅಪಘಾತದಲ್ಲಿ ಮಹಿಳೆ ಮಾತ್ರ ಬದುಕುಳಿದಿರುವುದು ಸಂತೋಷದ (Happy) ಸಂಗತಿ.

ಇಲ್ಲದೇ ನೋಡಿ ಮಹಿಳೆಗೆ ಕಾರು ಗುದ್ದುಗ ದೃಶ್ಯ :

ಇಲ್ಲಿ ಕ್ಲಿಕ್‌ ಮಾಡಿ

ಹಿಂದಿನ ಸುದ್ದಿ : ಭಾರತದಲ್ಲಿದೆ ಮದುವೆಗೂ ಮುಂಚೆ First Night ಆಚರಿಸುವ ಸಂಪ್ರದಾಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ದೇಶದ ಈ ರಾಜ್ಯದಲ್ಲಿ ಮದುವೆಗೂ ಮುಂಚೆ ಮೊದಲ ರಾತ್ರಿ (First night) ಆಚರಿಸುವ ವಿಚಿತ್ರ ಸಂಪ್ರದಾಯ ಇರುವುದು ಬಗ್ಗೆ ನಿಮಗೆ ಗೊತ್ತೇ.?.

ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿದೆ ನಮ್ಮ ಭಾರತ (Our India is known for unity in diversity) ದೇಶ. ಇಲ್ಲಿ ಸರ್ವ ಜನಾಂಗದವರು ವಾಸಿಗಳಾಗಿದ್ದಾರೆ. ರಕ್ತ ಸಂಬಂಧ ಮತ್ತು ಮದುವೆಯಂತಹ ವಿಚಾರಗಳಿಗೆ ಜನರು ವಿಶೇಷ ಸ್ಥಾನಮಾನ ನೀಡಿದ್ದಾರೆ.

ಅಲ್ಲದೇ ಅನಾದಿಕಾಲದಿಂದಲೂ ನಮ್ಮ ಹಿರಿಯರು ಮದುವೆಗೆ ಸಂಬಂಧಿಸಿದ ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳನ್ನು (traditions and rituals) ಆಚರಿಸುತ್ತಾ ಬಂದಿದ್ದಾರೆ.

ಇದನ್ನು ಓದಿ : ಮನೆಗಾಗಿ ಮನವಿ ; ನೀ ಬಾ, ಇಲ್ಲಾ ನಿನ್ನ ಮಗಳನ್ನು ಕಳುಹಿಸು ಎಂದ ಗ್ರಾ.ಪಂ. Member.!

ಪ್ರಪಂಚದ ಕೆಲವು ವಿಚಿತ್ರ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ಅಚ್ಚರಿಯಾಗುತ್ತದೆ. ನಮ್ಮ ದೇಶದಲ್ಲಿಯೂ ಸಹ ಕೆಲ ರಾಜ್ಯಗಳ ವಿವಿಧ ಭಾಗಗಳಲ್ಲಿ ವಿಭಿನ್ನ ಸಂಪ್ರದಾಯಗಳಿವೆ (Different traditions). ಅಂತದ್ದೆ ಒಂದು ಸಂಪ್ರದಾಯದ ಸುದ್ದಿ ಇಲ್ಲಿದೆ.

ಭಾರತದ ಈ ರಾಜ್ಯದಲ್ಲಿ ವಿವಾಹಕ್ಕೂ ಮುಂಚೆಯೇ ಎಲ್ಲರ ಒಪ್ಪಿಗೆಯೊಂದಿಗೆ ಮೊದಲ ರಾತ್ರಿ ನಡೆಯುತ್ತೆ. ಮೊದಲ ರಾತ್ರಿ ಮುಗಿಸಿದ ನಂತರ ಜೋಡಿಗಳು ಹಸೆಮಣೆ (Marriage after finishing the first night) ಏರುತ್ತಾರೆ.

ಇದನ್ನು ಓದಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಇಂತದ್ದೊಂದು ವಿಚಿತ್ರ ಸಂಪ್ರದಾಯ ಇರುವುದು ಛತ್ತೀಸ್​ಗಢದ ಬಸ್ತಾರದಲ್ಲಿ (Bastaradala of Chhattisgarh). ಇಲ್ಲಿ ಮದುವೆಯಾಗುವ ಜೋಡಿಗಳು ಮೊದಲು ತಮ್ಮ ಮೊದಲ ರಾತ್ರಿಯಲ್ಲಿ ಮಿಲನೋತ್ಸವ ಆಚರಿಸಿಕೊಂಡೇ ಬರಬೇಕು ಎಂದು ಹಲವು ವರದಿಗಳು ತಿಳಿಸಿವೆ.

ಈ ಒಂದು ಸಮುದಾಯವು ಇಂತದ್ದೊಂದು ಪರಂಪರೆ ಶತಮಾನಗಳಿಂದಲೂ ಆಚರಿಸುತ್ತಾ ಬಂದಿದೆ.

ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!

ಈ ಸಮುದಾಯದ ಹಿರಿಯರು ಹಾಗೂ ಗಂಡು ಹೆಣ್ಣಿನ ಕುಟುಂಬದವರು ಮದುವೆಯಾಗುವುದಕ್ಕಿಂತ ಮುಂಚೆ ಪ್ರೀತಿ ಮಾಡಲು ಹಾಗೂ ಮೊದಲ ರಾತ್ರಿ ಮುಗಿಸಿಕೊಂಡು ಬರಲು ಜೋಡಿಗೆ ಅವಕಾಶ ಮಾಡಿ ಕೊಡುತ್ತಾರೆ. ಅದು ಅತ್ಯಂತ ಅವಶ್ಯಕ (Very necessary) ಎಂಬುದು ಅವರ ಅಭಿಪ್ರಾಯ.

ಈ ಒಂದು ಪದ್ಧತಿಗೆ ಇಲ್ಲಿ ಗೋಟುಲು ಎಂದು ಕರೆಯಲಾಗುತ್ತದೆ. ಈ ಗೋಟುಲು ಪರಂಪರೆಯನ್ನು ಅಲ್ಲಿಯ ಮದಿಯಾ ಎಂಬ ಆದಿವಾಸಿಗಳು ಪವಿತ್ರ ಹಾಗೂ ಲೈಂಗಿಕತೆಯ ಕುರಿತು ನೀಡುವ ಶಿಕ್ಷಣ (Teaching about the sacred and sexuality) ಎಂದು ಪರಿಭಾವಿಸುತ್ತಾರೆ.

ಇದನ್ನು ಓದಿ : ಇನ್ಮುಂದೆ Seniors ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ.!

ಈ ಒಂದು ಪದ್ಧತಿಯನ್ನು ಲಿಂಗೋಪೆನ್​ ಅಥವಾ ಲಿಂಗೋದೇವ ಎಂಬುವವರ ಶುರು ಮಾಡಿದರು ಎಂಬ ನಂಬಿಕೆ ಇದೆ. ಪ್ರಥಮ ರಾತ್ರಿ ಮುಗಿದ ಬಳಿಕ ಮದುವೆಯಾದ ನಂತರ ಗಂಡು ಮತ್ತು ಹೆಣ್ಣು ಇಬ್ಬರೂ ಕೂಡ ಹೆಸರನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ (Both also changing names) ಕೂಡ ಈ ಸಮುದಾಯದಲ್ಲಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!