ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಒಂದು ಕಡೆ ಯುವಕನ ಚಾಕು ಇರಿತದಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರೆ, ಮತ್ತೊಂದು ಕಡೆ ಗಣೇಶ ವಿಸರ್ಜನೆ ಬಳಿಕ ಬಾಲಕ ದುರಂತವಾಗಿ ಸಾವನ್ನಪ್ಪಿದ್ದಾನೆ.
ಕಿತ್ತೂರಿನಲ್ಲಿ ಯುವಕನ ದಾಳಿ :
ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಯ ಕಿತ್ತೂರು ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ದರ್ಶನ್ ಎಂಬ ಯುವಕನ ಮೇಲೆ ಆರೋಪ ಹೊರಿಸಲಾಗಿದೆ. ಆತ ಯುವತಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ, ಮಡಿವಾಳಪ್ಪ ಎಂಬವರು ಕುಟುಂಬದವರ ಸಮ್ಮುಖದಲ್ಲಿ ತಿದ್ದಿಕೊಂಡು ನಡೆಯುವಂತೆ ಎಚ್ಚರಿಕೆ ನೀಡಿದ್ದರು.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.
ಪ್ರೀತಿ-ಪ್ರೇಮದ ಹೆಸರಲ್ಲಿ ಹೀಗೆ ಸುತ್ತಾಡುವುದು ಸರಿಯಲ್ಲವೆಂದು ಸಲಹೆ ನೀಡಿದ ಮಡಿವಾಳಪ್ಪನ ಮಾತು ದರ್ಶನ್ಗೆ ಕೋಪ ತಂದುಕೊಟ್ಟಿತ್ತು. ಆಕ್ರೋಶಗೊಂಡ ದರ್ಶನ್, ಮಡಿವಾಳಪ್ಪ ಅವರ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿತ ನಡೆಸಿದ್ದಾನೆ.
ಈ ದಾಳಿಯಲ್ಲಿ ಮಡಿವಾಳಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿತ್ತೂರು (Belagavi) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”.
ಹುಕ್ಕೇರಿಯಲ್ಲಿ ದುರಂತ :
ಇನ್ನೊಂದು ದುರ್ಘಟನೆ ಬೆಳಗಾವಿ (Belagavi) ಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆ ಮುಗಿಸಿ ವಾಪಸ್ ಮನೆಗೆ ಬರುವಾಗ, ಪ್ರಜ್ವಲ್ ಅಮ್ಮಣಗಿ (11) ಎಂಬ ಬಾಲಕ ಅದೇ ಟ್ರಾಕ್ಟರ್ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಪ್ರಜ್ವಲ್, ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಭಿಮಗೌಡ ಅಮ್ಮಣಗಿ ಅವರ ಪುತ್ರನಾಗಿದ್ದಾನೆ.
ಘಟನೆ ಸೋಮವಾರ ರಾತ್ರಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಪ್ರಜ್ವಲ್ ಸ್ಥಳದಲ್ಲೇ ಗಾಲಿಗೆ ಸಿಲುಕಿ ಮರಣ ಹೊಂದಿದ್ದಾನೆ. ಕುಟುಂಬ ಹಾಗೂ ಗ್ರಾಮದವರ ದುಃಖದ ನಡುವೆ ಪ್ರಜ್ವಲ್ ಅಂತ್ಯಕ್ರಿಯೆಯನ್ನು ಗುಡಸ ಗ್ರಾಮದ ಕೋಟಬಾಗಿ (Belagavi) ತೋಟದ ಜಮೀನಿನಲ್ಲಿ ನೆರವೇರಿಸಲಾಯಿತು. ಈ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಸಮಾಜಕ್ಕೆ ಸಂದೇಶ :
ಈ ಎರಡು ಘಟನೆಗಳು ಸಮಾಜಕ್ಕೆ ಮಹತ್ವದ ಸಂದೇಶ ನೀಡುತ್ತವೆ. ಪ್ರೀತಿ ಅಥವಾ ವೈಯಕ್ತಿಕ ವಿಚಾರಗಳ ಬಗ್ಗೆ ತಾಳ್ಮೆ ಕಳೆದುಕೊಂಡು ಹಿಂಸಾಚಾರಕ್ಕೆ ಹೋಗುವುದು ಜೀವಗಳಿಗೆ ಅಪಾಯ ತರಬಹುದು. ಅದೇ ವೇಳೆ, ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ವಾಹನ ಸಂಚಾರ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ.
ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಈ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣಗಳ ತನಿಖೆ ಕೈಗೊಂಡಿದ್ದಾರೆ.
DHFWS : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 432 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS) 2025 ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ DHFWS ವೆಬ್ಸೈಟ್ಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್ಸೈಟ್ (DHFWS Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಇಲಾಖೆಯ ಹೆಸರು :
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS)̤
ಹುದ್ದೆಗಳ ವಿವರ :
- ಹುದ್ದೆಗಳ ಸಂಖ್ಯೆ : 432.
- ಹುದ್ದೆಗಳ ಹೆಸರು : ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳು.
- ಉದ್ಯೋಗ ಸ್ಥಳ : ಕರ್ನಾಟಕ.
- ಅರ್ಜಿ ವಿಧಾನ : ಆನ್ಲೈನ್.
ಸಂಬಳ :
- DHFWS ಅಧಿಕೃತ ಅಧಿಸೂಚನೆಯ ಪ್ರಕಾರ ಸಂಬಳ ನೀಡಲಾಗುತ್ತದೆ.
ಲಂಚಕ್ಕಾಗಿ ರೂ.75 ಸಾವಿರ ಕೇಳಿದ PSI ಮತ್ತು ಕಾನ್ಸ್ಟೆಬಲ್ ಲೋಕಾಯುಕ್ತರ ಬಲೆಗೆ.!
ಶೈಕ್ಷಣಿಕ ಅರ್ಹತೆ :
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (DHFWS) ಅಧಿಸೂಚನೆಯ ಪ್ರಕಾರ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅನ್ವಯಿಸುತ್ತದೆ.
ವಯಸ್ಸಿನ ಮಿತಿ :
- ನೇಮಕಾತಿ ಅಧಿಸೂಚನೆಯ ಪ್ರಕಾರ ವಯೋಮಿತಿ ಅನ್ವಯಿಸುತ್ತದೆ.
ಆಯ್ಕೆ ವಿಧಾನ :
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ.
- ಸೂಚನೆಗಳನ್ನು ಗಮನದಿಂದ ಓದಿ.
- ಆನ್ಲೈನ್ ಅರ್ಜಿಯ ಲಿಂಕ್ನಲ್ಲಿ ಕ್ಲಿಕ್ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅವಶ್ಯಕತೆ ಇದ್ದಲ್ಲಿ).
- ಫಾರ್ಮ್ ಪರಿಶೀಲಿಸಿ, ಅಂತಿಮವಾಗಿ ಸಲ್ಲಿಸಿ.
- ಭವಿಷ್ಯದಲ್ಲಿ ಉಪಯೋಗಕ್ಕಾಗಿ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್ಟೇಬಲ್ ಪತಿ.!
ಪ್ರಮುಖ ದಿನಾಂಕಗಳು :
- ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಲಭ್ಯ.
- ಆನ್ಲೈನ್ ಅರ್ಜಿ ಕೊನೆಯ ದಿನಾಂಕ : ಶೀಘ್ರದಲ್ಲೇ ಲಭ್ಯ.
ಪ್ರಮುಖ ಲಿಂಕ್ಗಳು :
- ಅಧಿಕೃತ ಅಧಿಸೂಚನೆ PDF : Click Here
- ಅಧಿಕೃತ ವೆಬ್ಸೈಟ್ : hfwcom.karnataka.gov.in
Disclaimer : The above given information is available On online, candidates should check it properly before applying. This is for information only.