ಜನಸ್ಪಂದನ ನ್ಯೂಸ್, ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯು ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 11 ತಿಂಗಳುಗಳ ಕಾಲ ಪ್ರತೀ ತಿಂಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಹಣ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ : ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿರುವ ಆಹಾರ ಸೇವಿಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ.
ಆದ್ರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಈ ಮೂರು ತಿಂಗಳ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಜುಲೈ ತಿಂಗಳ ಹಣ ದಸರಾ ಹಬ್ಬಕ್ಕೆ ಮುನ್ನ ಅಂದ್ರೆ ಆಯುಧ ಪೂಜೆ ಸಂದರ್ಭದಲ್ಲಿ ಹಣ ಬಿಡುಗಡೆಯಾಗಲಿದೆ. ಆಗಸ್ಟ್ ತಿಂಗಳ ಹಣ ದೀಪಾವಳಿಗೆ ಮುಂಚಿತವಾಗಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಒಟ್ಟು 1.28 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1.21 ಕೋಟಿ ಜನರಿಗೆ ಹಣ ಸಿಗ್ತಾ ಇದೆ. ಆದ್ರೆ ಇದರಲ್ಲಿ ಸರಿಸುಮಾರು 1.72 ಲಕ್ಷ ಫಲಾನುಭವಿಗಳು ಐಟಿ ತೆರಿಗೆದಾರರಿದ್ದಾರೆ ಎಂಬುದು ವಿಶೇಷ.
ಈ ನಿಟ್ಟಿನಲ್ಲಿ ಅಂತವರ ಹೆಸರನ್ನು ಪರಿಷ್ಕರಣೆ ಮಾಡಿ ಹೆಸರನ್ನು ತೆಗೆದು ಹಾಕುವ ನಿರ್ಧಾರವನ್ನು ತೆಗೆದು ಹಾಕಲು ಸರ್ಕಾರ ನಿರ್ಧರಿಸಿದೆ.
ಆದ್ರೆ ಇದರ ಜೊತೆಗೆ ಇನ್ನೊಂದು ಬೇಸರದ ಸಂಗತಿ ಕೂಡ ಇದೆ. ಅದೇನು ಅಂದ್ರೆ, ತಾಂತ್ರಿಕ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ 1.82 ಲಕ್ಷ ಅರ್ಹ ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಹಣ ಪಡೆಯಲು ಸಾಧ್ಯ ಆಗ್ತಾ ಇಲ್ಲಾ.
ಇದನ್ನು ಓದಿ : ಮಕ್ಕಳಿಗೆ Mobile ಕೊಡುವ ಪೋಷಕರೇ ತಪ್ಪದೇ ಈ ವಿಡಿಯೋವನ್ನು ಒಮ್ಮೆ ನೋಡಿ.!
ಇದರಲ್ಲಿ ಕೆಲವರಿಗೆ ಹಣ ಬ್ಯಾಂಕಿಗೆ ಹೋಗಿದೆ ಆದ್ರೆ ಬ್ಯಾಂಕ್ನಲ್ಲಿ ಇಕೆವೈಸಿಯಂತಹ ಕೆಲವು ತಾಂತ್ರಿಕ ಕಾರಣದಿಂದಾಗಿ ಹಣ ಜಮಾ ಆಗುತ್ತಿಲ್ಲ.