ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲೇ ಬೆಳಗಾಔಇ ಜಿಲ್ಲೆಯ ಬೈಲಹೊಂಗಲ ಶಾಸಕ ಮಹಂತೇಶ ಕೌಜಲಗಿ ಅವರ ಕಾರು ಅಪಘಾತವಾಗಿರುವ (car accident) ಘಟನೆ ನಡೆದಿದೆ.
ಶಾಸಕರ ಭವನದಿಂದ ಹೊರಟಿದ್ದ ಶಾಸಕ ಮಹಂತೇಶ್ ಕೌಜಲಗಿ ಅವರ ವಾಹನ ವಿಧಾನಸೌಧ ಮುಂಭಾಗದಲ್ಲೇ ಅಪಘಾತಕ್ಕೀಡಾಗಿದೆ.
ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?
ವಿಧಾನಸೌಧದಿಂದ ಹೊರಕ್ಕೆ ಬರ್ತಿದ್ದ ವೇಳೆ ಶಾಸಕರ ಇನೋವಾ ಕಾರ್ಗೆ ಪೋಲೋ ಕಾರ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಅತಿವೇಗವಾಗಿ ಬಂದು ಪೊಲೋ ಕಾರು ಚಾಲಕ ಶಾಸಕರ ಕಾರಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಇದರಿಂದ ಶಾಸಕರಿಗೆ ಸ್ವಲ್ಪ ಮಟ್ಟಿನ ಗಾಯಗಳಾಗಿದ್ದು, ಬಳಿಕ ಶಾಸಕ ಬೇರೊಂದು ಕಾರಿನಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!
ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : ಬಾಯ್’ಫ್ರೆಂಡ್ ಭೇಟಿಯಾಗಲು ಬಂದು ಆತನ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ ; ಮುಂದೆನಾಯ್ತು Video ನೋಡಿ.!