ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಮಹಿಳೆಯ ಮೇಲೆ ಬಿಜೆಪಿ ಮೇಯರ್ ಅತ್ಯಾಚಾರವೆಸಗಿದ ಘಟನೆ ಇಂದೋರ್ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!
32 ವರ್ಷ ವಯಸ್ಸಿನ ಮಹಿಳೆ ದ್ವಾರಕಾಪುರಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.
ಶಾನು ಅಲಿಯಾಸ್ ನಿತೀಶ್ ಶರ್ಮಾ ಎಂಬಾತ ತನ್ನ ಮೇಲೆ 2023ರ ಮೇ 10 ರಿಂದ 2024ರ ಏಪ್ರಿಲ್ 16ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಬ್ಯಾಂಕ್ನಲ್ಲಿ 1 ಲಕ್ಷ ರೂಪಾಯಿ ಸಾಲ ಹೊಂದಿದ್ದ ಮಹಿಳೆಗೆ, ಸಾಲವನ್ನು ಮರು ಪಾವತಿಸಲು ಕೌನ್ಸಿಲರ್ ಸಾನು ಒಂದು ಲಕ್ಷ ರೂಪಾಯಿ ನೀಡಿದ್ದರು.
ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ..!
ನಾನು ಆರ್ಥಿಕ ಸಂಕಷ್ಟದಲ್ಲಿದ್ದಿದ್ದರಿಂದ ಸಹಾಯದ ನೆಪದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ನನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿಯೂ ಆಮಿಷವೊಡ್ಡಿ ಈ ಕೆಲಸ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ನನ್ನ ಬಾಯ್ಫ್ರೆಂಡ್ನಿಂದ ದೂರ ಇರುವಂತೆ ಸಾನು ಒತ್ತಡ ಹಾಕಿದ್ದರು, ಇದಾದ ನಂತರ ಅವರು ನನಗೆ ಕಿರುಕುಳ ನೀಡಲು ಆರಂಭಿಸಿದ್ದರಿಂದ ವಿರುದ್ಧ ದೂರು ದಾಖಲಿಸಬೇಕಾಯಿತು.
ಭಾರತೀಯ ದಂಡಸಂಹಿತೆ ಸೆಕ್ಷನ್ 376, 376 (2) (ಎನ್) ಮತ್ತು 506ರ ಅನ್ವಯ ಎಫ್ಐಆರ್ ದಾಖಲಾಗಿದ್ದು, ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ : Nurse ಜೊತೆ ಹೆಡ್ ಕಾನ್ಸ್ಟೇಬಲ್ ಅಕ್ರಮ ಸಂಬಂಧ ; ರೆಡ್ ಹ್ಯಾಂಡ್ಆಗಿ ಹಿಡಿದ ಕಾನ್ಸ್ಟೇಬಲ್ ಪತ್ನಿ.!
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ರಾಜೇಶ್ ದಾಂದೋತಿಯಾ ಮಾಹಿತಿ ನೀಡಿದ್ದಾರೆ.