ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನಲ್ಲಿ 9 ಸಾವಿರ ರೂಪಾಯಿ ಲಂಚ (bribe) ಪಡೆಯುತ್ತಿದ್ದ ವೇಳೆ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಭೋಪಾಲ್ ಎಂಬುವವರು ಲೋಕಾಯುಕ್ತ ಬಲೆಗೆ (Lokayukta trap) ಬಿದ್ದಿದ್ದಾರೆ.
ಇದನ್ನು ಓದಿ : Road Accident : ಖಾಸಗಿ ಬಸ್ ಪಲ್ಟಿ ; ನಾಲ್ವರ ಸಾ*ವು : 38ಕ್ಕೂ ಹೆಚ್ಚು ಜನರಿಗೆ ಗಾಯ.!
ಹೊಟೇಲ್ ವೊಂದರ ಪರವಾನಗಿ ಕೊಡಲು (license) ಇನ್ಸ್ಪೆಕ್ಟರ್ ಭೋಪಾಲ್ 9 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.
ಈ ಕುರಿತು ಮಂಗಳೂರು ಮೂಲದ ಹೊಟೇಲ್ ಮಾಲೀಕ ದೀಕ್ಷಿತ್ ಅವರು ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ದಾಳಿ (raid) ನಡೆಸಿದ್ದರು.
ಇದನ್ನು ಓದಿ : ಕೋಲೆ ಬಸವನ ಗುದ್ದಿದ ಏಟಿಗೆ ಚಲಿಸುವ ಟ್ರಕ್ ಕೆಳಗೆ ಬಿದ್ದ ಬೈಕ್ ಸವಾರ ; ಮುಂದೆನಾಯ್ತು Video ನೋಡಿ.
ಲಂಚ ಪಡೆಯುತ್ತಿದ್ದಾಗ ಕಾರ್ಮಿಕ ಭವನದಲ್ಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.