ಜನಸ್ಪಂದನ ನ್ಯೂಸ್, ಬೀದರ್ : ಬೀದರ್ ಜಿಲ್ಲೆಯ ಹುಲಸೂರು (Hulasuru) ತಾಲೂಕಿನ ಬೇಲೂರು ಗ್ರಾಮದಲ್ಲಿ ಎಎಸ್ಐ ಅಧಿಕಾರಿಯೊಬ್ಬರು ರೈತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಘಟನೆ ನಡೆದಿದೆ.
ಹುಲಸೂರು ಠಾಣೆಯ ಎಎಸ್ಐ ಶೌರಾಜ್ ಈ ರೀತಿ ರೈತನಿಂದ ಲಂಚ (bribe) ಸ್ವೀಕರಿಸಿದ್ದಾರೆ.
ಇದನ್ನು ಓದಿ : ಅಕ್ಕಿ ಸಾಲ ಪಡೆದ ಅಧಿಕಾರಿ Suspend.!
ಎಎಸ್ಐ ಬಡ ರೈತನ ಬಳಿ 1 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟು, ಬಳಿಕ 400 ರೂ. ಪಡೆದಿದ್ದಾರೆ.
ಹೊಲದಲ್ಲಿ ಟ್ರಾನ್ಸ್ಫಾರ್ಮರ್ ಅವಾಂತರದಿಂದ 2 ಎಕರೆ ಕಬ್ಬಿನ ಬೆಳೆ ಸುಟ್ಟು ಬೂದಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಮಾಜಿ ಎಂಎಲ್ಸಿ ವಿಜಯಸಿಂಗ್ ತೆರಳಿ ಅಧಿಕಾರಿಗಳಿಗೆ (officer) ಕ್ಲಾಸ್ ತೆಗೆದುಕೊಂಡಿದ್ದರು.
ಬಳಿಕ ಸ್ಥಳದ ಪಂಚನಾಮೆಗೆ ಎಎಸ್ಐ ಶೌರಾಜ್ ತೆರಳಿದ್ದರು. ಪಂಚನಾಮೆಗೆ ಬಂದಿದ್ದಕ್ಕೆ ಖರ್ಚು ಆಗಿದೆ. ಆ ಖರ್ಚು ಕೊಡಿ ಎಂದು ಎಎಸ್ಐ 1,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಇದನ್ನು ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ ; Video viral.!
ಬಡ ರೈತ ಹಣ ಇಲ್ಲವೆಂದು ಹೇಳಿದ್ದಾರೆ. ಆದರೂ ಇದನ್ನು ಕೇಳದ ಎಎಸ್ಐ ಕೊನೆಗೆ 400 ರೂಪಾಯಿಗಳನ್ನ ಬೇರೆಯವರ ಮೊಬೈಲ್ ಗೆ ಫೋನ್ ಪೇ (phone pay) ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.