ಜನಸ್ಪಂದನ ನ್ಯೂಸ್, ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ಸರ್ವೇ ಕಚೇರಿಯಲ್ಲಿ 4 ಸಾವಿರ ಲಂಚ (bribe) ಪಡೆಯುತ್ತಿದ್ದ ವೇಳೆ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರ್ವೇಯರ್ ಎಚ್. ಕೆ. ಮಹದೇವೇಗೌಡ ಅವರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದು, ಸದ್ಯ ಅವರನ್ನು ಬಂಧಿಸಲಾಗಿದೆ.
ಇದನ್ನು ಓದಿ : ತಡರಾತ್ರಿವರೆಗೂ ವಕೀಲರ ಪ್ರತಿಭಟನೆ : ಕೊನೆಗೂ ಪಿಎಸ್ಐ suspend.!
ಸರ್ವೇಯರ್, ಅಕ್ರಂ ಪಾಷಾ ಎಂಬುವವರಿಗೆ ಪ್ರಾಪರ್ಟಿ ಕಾರ್ಡ್ (property card) ಕೊಡುವುದಕ್ಕೆ 5 ಸಾವಿರ ಲಂಚಕ್ಕೆ ಬೇಡಿಕೆ (demand) ಇಟ್ಟು, 1 ಸಾವಿರವನ್ನು ಮುಂಗಡವಾಗಿಯೇ ಪಡೆದಿದ್ದರು.
ಬಳಿಕ, ಅಕ್ರಂ ಪಾಷಾ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅಂತೆಯೇ ಉಳಿದ ₹ 4 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಆರೋಪಿ ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದರು.
ಇದನ್ನು ಓದಿ : 4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ SI ದಂಪತಿ ಆಸ್ತಿ ; ಅದ್ಹೇಗೆ.?
ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ಅವರ ನೇತೃತ್ವದ ತಂಡ (led by) ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.