ಜನಸ್ಪಂದನ ನ್ಯೂಸ್, ಡೆಸ್ಕ್ : ಪೊಲೀಸ್ ಅಧಿಕಾರಿಯೊಬ್ಬರು (police officer) ಠಾಣೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ (Varanasi, Uttar Pradesh) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಘಟನೆಯ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ಮದುವೆಯ ಮೆರವಣಿಗೆಯಲ್ಲಿ ಬಲವಂತವಾಗಿ ಕುದುರೆಗೆ ಸಿಗರೇಟ್ ಸೇದಿಸಿದ ಯುವಕರು ; Vedio ವೈರಲ್.!
ಸಂಕತ್ ಮೋಚನ್ ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದ್ದು, ಹೊರ ಠಾಣೆಯ ಉಸ್ತುವಾರಿ ನವೀನ್ ಚತುರ್ವೇದಿ (Naveen Chaturvedi is the in- charge of the outer station) ವಿದ್ಯಾರ್ಥಿಯ ಕೂದಲನ್ನು ಹಿಡಿದು ಎಳೆದಾಡಿದ ಪೊಲೀಸ್ ಅಧಿಕಾರಿ ಎಂದು ವರದಿಯಿಂದ ತಿಳಿದು ಬಂದಿದೆ.
ವಿದ್ಯಾರ್ಥಿಗಳ ಜೊತೆಗೆ ಪೊಲೀಸ್ ಅಧಿಕಾರಿಯು ಗೂಂಡಾಗಳಂತೆ ವರ್ತಿಸಿದ್ದು, ಈ ಹಿನ್ನೆಲೆ ಆತ ಸಸ್ಪೆಂಡ್ ಆಗಿದ್ದಾನೆ.
ಇದನ್ನು ಓದಿ : Special news : ನೀವು ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!
ಪೊಲೀಸ್ ಅಧಿಕಾರಿಯು ವಿದ್ಯಾರ್ಥಿಯೊಬ್ಬನ ಕೂದಲನ್ನು ಹಿಡಿದು ಎಳೆದಾಡುವುದನ್ನು (He grabbed a student’s hair and dragged him) ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಅಂಜಿದ ವಿದ್ಯಾರ್ಥಿ, ಸಹಾಯಕ್ಕಾಗಿ “ಭಜರಂಗಬಲಿ” ಎಂದು ಕೂಗಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಲ್ಲದೇ ನೋವನ್ನು ಸಹಿಸಿಕೊಳ್ಳಲಾಗದೆ ಆತ ಭಜರಂಗಬಲಿಯ ಹೆಸರನ್ನು ಜಪಿಸಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ಕ್ರೂರಿಯಂತೆ ವರ್ತಿಸಿದ್ದಾನೆ (Act like a brute). ಆ ವಿದ್ಯಾರ್ಥಿ “ಅಣ್ಣಾ, ನಾನು ಅಲ್ಲಿ ಇರಲಿಲ್ಲ” ಎಂದು ಹೇಳಿದ್ದಾನೆ. ಆದರೆ ವಿದ್ಯಾರ್ಥಿಯ ಮಾತಿಗೆ ಕಿವಿಗೊಡದೇ ಪೊಲೀಸ್ ಅಧಿಕಾರಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಕ್ಸಾರ್ನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಹೊರ ಠಾಯಲ್ಲಿ ಪೊಲೀಸ್ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಇಬ್ಬರೂ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಲ್ಲೆಯಲ್ಲಿ ಇಬ್ಬರಿಗೂ ತೀವ್ರ ಗಾಯಗಳಾಗಿವೆ.
ಪೊಲೀಸ್ ಅಧಿಕಾರಿಯ ದರ್ಪದ ವಿಡಿಯೋ ಇಲ್ಲಿದೆ :
डंडे में ताकत,अधमरा छात्र है
यूपी जिला वाराणसी लंका थाने क्षेत्र के सिंघम है. छात्रों से बात करना कम लट्ठ बजाना और बाल खिचनें पर भरोसा शायद ज्यादा रखते है?pic.twitter.com/r2tDriGtGa— Tushar Rai (@tusharcrai) March 1, 2025
ಹಿಂದಿನ ಸುದ್ದಿ : ನಿಮ್ಮ ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!
ಜನಸ್ಪಂದನ ನ್ಯೂಸ್, ವಿಶೇಷ : ಸಂಖ್ಯಾಶಾಸ್ತ್ರದಲ್ಲಿ (Numerology) ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯ. ಇವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ .
ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ (Financial status, family life) ಹೀಗೆ ಎಲ್ಲವು ಇದರಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ. ಹಾಗಾದರೆ ನಿಮ್ಮ ಹುಟ್ಟಿದ ತಿಂಗಳು, ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.
ಇದನ್ನು ಓದಿ : ಯುವಕನನ್ನು ಸೆಕ್ಸ್ಗೆ ಬಳಸಿಕೊಂಡು ಮೋಸ ಮಾಡಿದ್ರಾ CISF ಮಹಿಳಾ ಅಧಿಕಾರಿ.?
ಜನವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಯಾವುದಕ್ಕೂ ಹೆದರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು (decision and opinion) ಬೇರೆಯವರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲವಂತೆ. ನಾಯಕತ್ವ ಗುಣಗಳನ್ನು (Leadership qualities) ಈ ವ್ಯಕ್ತಿ ಹೊಂದಿರುತ್ತಾರೆ.
ಫೆಬ್ರವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಸ್ವತಂತ್ರ ಜೀವನದ ಕನಸು (Dream of independent life) ಕಾಣುತ್ತಾರೆ. ಇವರು ಸಾಹಸಮಯ ಜೀವನ ಇಷ್ಟಪಡುತ್ತಾರೆ. ಅಲ್ಲದೇ ಹೆಚ್ಚು ನಿಷ್ಠಾವಂತರಾಗಿದ್ದು (faithful), ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತದೆ.
ಇದನ್ನು ಓದಿ : ನೀವು Filter ನೀರು ಕುಡಿಯುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.!
ಮಾರ್ಚ್ :
ಮಾರ್ಚ್ನಲ್ಲಿ ಜನಿಸಿದರೆ ವ್ಯಕ್ತಿಗಳು ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು (Artistic qualities) ಹೊಂದಿರುತ್ತಾರೆ. ಭಾವನೆಗಳಿಗೆ ಹೆಚ್ಚು ಒತ್ತು ನೀಡಿ, ಎಲ್ಲರಿಗೂ ಒಳಿತು ಬಯಸುವ ಮಂದಿ ಆಗಿರುತ್ತಾರೆ. ಶಾಂತಿ ಪ್ರಿಯರು, ಸಹಾನುಭೂತಿ ಗುಣ (Peace loving, compassionate nature) ಹೊಂದಿರುತ್ತಾರೆ.
ಏಪ್ರಿಲ್ :
ಈ ತಿಂಗಳಲ್ಲಿ ಜನಿಸಿದವರು ತುಂಬಾನೆ ಬಲಶಾಲಿಗಳು, ಮೇಲ್ನೋಟಕ್ಕೆ (Apparently) ಕಾಣುವುದಕ್ಕಿಂತ ತುಂಬಾನೆ ದೃಢಶಾಲಿಗಳು (strong) ಆಗಿರುತ್ತಾರೆ. ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೆ ಜಯಿಸುವ ಮನೋಭಾವದವರಾಗಿದ್ದು, ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ವ್ಯಕ್ತಿಯಾಗಿರುತ್ತಾರೆ ಇವರು.
ಇದನ್ನು ಓದಿ : SSLC ಪಾಸ್ ಆಗಿದ್ರೆ ಸಾಕು : ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ; ಇಲ್ಲಿದೆ ಮಾಹಿತಿ.!
ಮೇ :
ಮೇ ತಿಂಗಳಲ್ಲಿ ಜನಿಸಿದವರಲ್ಲಿ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಇವರಿಗೆ ಹೆಚ್ಚು ಸ್ನೇಹಿತರ ಬಳಗವೇ (group of friends) ಇರುತ್ತದೆ. ಯಾವಾಗಲು ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು ಇವರು. ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ (self- confidence) ಕಳೆದುಕೊಳ್ಳದ ಜನರಾಗಿರುತ್ತಾರೆ.
ಜೂನ್ :
ಈ ತಿಂಗಳಿನಲ್ಲಿ ಜನಿಸಿದವರು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ (An emotional being). ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲ ಸಮಯದಲ್ಲೂ ಧನಾತ್ಮಕ ವಿಚಾರಗಳ (Positive thoughts) ಕುರಿತು ಯೋಚಿಸುತ್ತಾರೆ.
ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!
ಜುಲೈ :
ಜುಲೈನಲ್ಲಿ ಜನಿಸಿದ ವ್ಯಕ್ತಿಗಳು ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತಿಯಿಂದ (peaceful) ಎಲ್ಲವನ್ನು ನಿಭಾಯಿಸುವ ಗುಣ ಹೊಂದಿರುತ್ತಾರೆ. ಇವರು ಕುಟುಂಬಕ್ಕಾಗಿ ಯಾವ ರೀತಿಯ ಕಷ್ಟಗಳನ್ನು ಕೂಡ ಎದುರಿಸುವ ಮನಸ್ಸು ಉಳ್ಳವರು.
ಆಗಸ್ಟ್ :
ಆಗಸ್ಟ್ನಲ್ಲಿ ಜನಿಸಿದ ವ್ಯಕ್ತಿ ಎಲ್ಲರನ್ನು ಪ್ರೀತಿಸುವ ಗುಣಗಳ ಹೊಂದಿರುತ್ತಾರೆ. ಇವರು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು (More inclined towards spirituality) ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ಮಂದಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಇವರು ಹೊಂದಿರುತ್ತಾರೆ. ಹಿರಿಯರಿಗೆ, ಪ್ರೀತಿ ಪಾತ್ರರಲ್ಲಿ ವಿನಯದಿಂದ (Sincerely) ನಡೆದುಕೊಳ್ಳುವ ಗುಣ ಹೊಂದಿರುತ್ತಾರೆ.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಸೆಪ್ಟೆಂಬರ್ :
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಜನರು ಆಲೋಚನೆಗಳನ್ನು ದೃಢವಾಗಿ ನಂಬುವ ಗುಣದವರು. ಬೇರೆಯವರ ಮಾತಿಗಿಂತ ಅವರ ಮೇಲೆ ಅವರಿಗೆ ನಂಬಿಕೆ ಹೆಚ್ಚಾಗಿರುತ್ತದೆ (They trust their words more than anyone else’s words).
ಅಕ್ಟೋಬರ್ :
ಅಕ್ಟೋಬರ್ನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಪ್ರಮಾಣಿಕರು, ಬುದ್ಧಿವಂತರು, ಗುರಿ ಕಡೆಗೆ ಯಾವಾಗಲು ಯೋಚಿಸುವವರು (Conscientious, intelligent, always thinking towards the goal). ಇವರೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ಯಾವಾಗಲು ಮುಂದಾಗಿರುತ್ತಾರೆ.
ಇದನ್ನು ಓದಿ : ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ : ವಜ್ರವನ್ನೇ ಕದ್ದೊಯ್ದ ಇರುವೆ, Video Viral.!
ನವೆಂಬರ್ :
ನವೆಂಬರ್ನಲ್ಲಿ ಜನಿಸಿದವರು ಕುಟುಂಬಕ್ಕಾಗಿ ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುತ್ತಾರೆ. ಯಾರನ್ನಾದರೂ ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವ ಗುಣ ಹೊಂದಿರುತ್ತಾರೆ. ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ (More faith in charity) ಇಟ್ಟಿದ್ದು ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ.
ಡಿಸೆಂಬರ್ :
ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ (Employment sector and financial status) ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಮಾತನಾಡಲು, ಕೆಲಸ ಮಾಡಲು ಹಿಂಜರಿಯುವುದಿಲ್ಲ ಇವರು. ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ.