Sunday, March 16, 2025
HomeJobAirports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

Airports Authority of India ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (Airports Authority of India) ದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅಧಿಸೂಚನೆಯನ್ನು (Notification) ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

ಇದನ್ನು ಓದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಹುದ್ದೆಗಳ ವಿವರ :

ಅ.ನಂ

ವಿವಿರ

1 ಹುದ್ದೆಯ ಹೆಸರು :

ಜೂನಿಯರ್ ಅಸಿಸ್ಟೆಂಟ್

2 ಒಟ್ಟು ಹುದ್ದೆಗಳು :

89

ವಿದ್ಯಾರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ SSLC, PUC ಮತ್ತು ಡಿಪ್ಲೊಮಾ (Deploma) ವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ : ಅಭ್ಯರ್ಥಿಯು 01-11-2024 ರಂತೆ

  • ಕನಿಷ್ಠ 18 ವರ್ಷಗಳನ್ನು ಮತ್ತು
  • ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

ವಯೋಮಿತಿ ಸಡಿಲಿಕೆ :

  • OBC ಅಭ್ಯರ್ಥಿಗಳು : 3 ವರ್ಷಗಳು.
  • SC/ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿಶುಲ್ಕ :

  • ಸಾಮಾನ್ಯ/OBC/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 1000/-
  • ಮಹಿಳೆಯರು/SC/ST/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ : ಶುಲ್ಕ ಇರುವುದಿಲ್ಲ.
  • ಪಾವತಿ ವಿಧಾನ : ಆನ್‌ಲೈನ್ (Online).

ವೇತನ ಶ್ರೇಣಿ :

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.31,000/- ರಿಂದ ರೂ.92,000/-ರವರೆಗೆ (ಪ್ರತಿ ತಿಂಗಳು) ವೇತನವನ್ನು ನಿಗದಿಪಡಿಸಲಾಗಿದೆ.

ಇದನ್ನು ಓದಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ racket ; ನಟಿ – ಮಾಡೆಲ್‌ಗಳು ಸೇರಿ ನಾಲ್ವರ ರಕ್ಷಣೆ.!

ಆಯ್ಕೆ ವಿಧಾನ :

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-based test) ಮತ್ತು
  • ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಹುದ್ದೆಯ ಸ್ಥಳ : ಅಖಿಲ ಭಾರತ.

ಅರ್ಜಿಸಲ್ಲಿಸುವ ಕ್ರಮಗಳು :

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ನೀವು ಅರ್ಜಿ ಸಲ್ಲಿಸಲಿರುವ AAI ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • Junior Assistant ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆ (Form number/Acceptance number) ಯನ್ನು ಸುರಕ್ಷಿತವಾಗಿಡಿ.

ಇದನ್ನು ಓದಿ : ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 4115 ಹುದ್ದೆಗಳ ನೇಮಕಾತಿ.!

ಅರ್ಜಿ ಸಲ್ಲಿಸುವ ವಿಧಾನ :

  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ (Official website) ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 05 March 2025.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 11 April 2025.

ಪ್ರಮುಖ ಲಿಂಕ್‌ಗಳು :

  • ಅಧಿಕೃತ ಅಧಿಸೂಚನೆ : Click Here
  • ಅಪ್ಲೇ ಆನ್‌ಲೈನ್‌ : Click Here

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Health : ಈ ಹಣ್ಣನ್ನು ತಿಂದರೆ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದಂತೆ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಕಾಯಿಲೆಗಳು ಯಾವಾಗಲೂ ಹೇಳಿ ಕೇಳಿ ಬರುವುದಿಲ್ಲ. ಕೆಲವೊಂದು ರೋಗಲಕ್ಷಣಗಳು ನಮ್ಮ ದೇಹವನ್ನು ಸೇರಿಕೊಂಡು, ಏನಾದರೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದ ನಂತರ ನಮಗೆ ಆ ಕಾಯಿಲೆಯ ಬಗ್ಗೆ ಗೊತ್ತಾಗುವುದು.

ಇತ್ತೀಚಿನ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ (Kidney problem) ಕಾಮನ್ ಆಗಿ ಬಿಟ್ಟಿದೆ. ಅದರಲ್ಲಿಯೂ ಈ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗೀಗ ಯುವ ಜನತೆಯನ್ನು ಕೂಡ ಕಾಡಲಾರಂಭಿಸಿದೆ. ಆದರೆ ಈ ಹಣ್ಣನ್ನು ನೀವು ತಿನ್ನುವುದರಿಂದ ನೈಸರ್ಗಿಕವಾಗಿ ಕಿಡ್ನಿಯಲ್ಲಿನ ಕಲ್ಲು ಕರಗುವುದು (Eating this fruit naturally dissolves kidney stones).

ಇದನ್ನು ಓದಿ : ಬೈಕ್ ಮೇಲೆ “Police” ಸ್ಟಿಕ್ಕರ್ ; ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ; ನೋಟಿಸ್ ಬೆನ್ನಲ್ಲೇ ದಂಡ ಕಟ್ಟಿದ ಚಾಲಕ.!

* ಆ ಹಣ್ಣು ಯಾವುದೆಂದರೆ ಆವಕಾಡೊ (Avocado). ಈ ಹಣ್ಣು ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಮೂತ್ರಪಿಂಡದ ಕಾಯಿಲೆ ಇರುವವರು ಈ ಹಣ್ಣನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆವಕಾಡೊವನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬು, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿವೆ.

* ದ್ರಾಕ್ಷಿ, ನಿಂಬೆ, ಕಿತ್ತಳೆ (Grapes, lemons, oranges) ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಿ, ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಲು ಅನುಮತಿಸುವುದಿಲ್ಲ.

ಇದನ್ನು ಓದಿ : ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ racket ; ನಟಿ – ಮಾಡೆಲ್‌ಗಳು ಸೇರಿ ನಾಲ್ವರ ರಕ್ಷಣೆ.!

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯಬೇಕು. ಈ ರಸವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಮೂತ್ರನಾಳದಿಂದ ವಿಷ ಮತ್ತು ಜೀರ್ಣವಾಗದ ತ್ಯಾಜ್ಯವನ್ನು ತೆಗೆದುಹಾಕಬಹುದು (Toxins and undigested waste can be removed from the urinary tract) ಮತ್ತು ಸ್ವಚ್ಛಗೊಳಿಸಬಹುದು.

* ದಾಳಿಂಬೆಯು (pomegranate) ವಿಟಮಿನ್ ಸಿ, ಕೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಇದನ್ನು ತಿನ್ನುವುದರಿಂದ ಕಿಡ್ನಿ ಆರೋಗ್ಯವಾಗಿರುತ್ತೆ. ಹಾಗಾಗಿ ಮೂತ್ರಪಿಂಡಗಳು ಆರೋಗ್ಯವಾಗಿರಲು ನೀವು ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

ಇದನ್ನು ಓದಿ : ಸುಮ್ಮನೆ ನಿಂತಿದ್ದ ಯುವಕನನ್ನು ಗುಂಡಿ* ಕೊಂ* ದು*ರ್ಮಿಗಳ ಗ್ಯಾಂಗ್ ; Video ವೈರಲ್.!

ದಾಳಿಂಬೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ದೇಹದಲ್ಲಿ ರಕ್ತದೊತ್ತಡ, ಉರಿಯೂತ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು. ಕಡಿಮೆ ರಂಜಕ ಮತ್ತು ಸೋಡಿಯಂ (Phosphorus and sodium) ಕಾರಣದಿಂದಾಗಿ ಇದು ಮೂತ್ರಪಿಂಡಗಳಿಗೆ ಉತ್ತಮ ಹಣ್ಣು ಅಂತ‌ ಹೇಳಬಹುದು.

* ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, ನೀವು ಸಾಮಾನ್ಯ ಪೇರಳೆ, ಪೀಚ್, ಕಲ್ಲಂಗಡಿ, ಚೆರ್ರಿ, ದ್ರಾಕ್ಷಿ, ಅನಾನಸ್ ಮುಂತಾದ ಹಣ್ಣುಗಳನ್ನು ಸಹ ತಿನ್ನಬಹುದಾಗಿದೆ.

ಅನಾನಸ್ ಹಣ್ಣು ಬ್ರೋಮೆಲಿನ್ ಎಂಬ ಜೀರ್ಣಕಾರಿ ಕಿಣ್ವವನ್ನು (Digestive enzyme) ಹೊಂದಿದ್ದು, ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಮ್ಮ‌ ದೇಹವನ್ನು ರಕ್ಷಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು, ಅವುಗಳನ್ನು ಕರಗಿಸಲು ಸಹಾಯ ಮಾಡುತ್ತದೆ (Helps to break up kidney stones, dissolve them).

ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!

*ಬ್ಲ್ಯಾಕ್ಬೆರಿ, ಸ್ಟ್ರಾಬೆರಿಗಳಂತಹ ಬೆರ್ರಿಗಳು ಕಡಿಮೆ ಪ್ರಮಾಣದ ಸೋಡಿಯಂ ಮತ್ತು ಫಾಸ್ಫರಸ್ ಅನ್ನು ಹೊಂದಿವೆ. ಇವು ವಿಟಮಿನ್ ಸಿ, ಮ್ಯಾಂಗನೀಸ್, ಫೋಲೇಟ್, ಆಂಟಿಆಕ್ಸಿಡೆಂಟ್ಗಳು, ಪೊಟ್ಯಾಸಿಯಮ್, ಫೈಬರ್ ನಲ್ಲಿ ಸಮೃದ್ಧವಾಗಿವೆ.

ಅಲ್ಲದೇ ಇವುಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಸಂಕೋಚಕ ಗುಣಗಳನ್ನು (Astringent properties) ಹೊಂದಿರುವ ಈ ಹಣ್ಣುಗಳು, ಅಂಗಾಂಶಗಳನ್ನು ಬಿಗಿಗೊಳಿಸಲು ಮತ್ತು ನೀರಿನ ಧಾರಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

* ಕಡಿಮೆ ಪೊಟ್ಯಾಸಿಯಮ್ ಮತ್ತು ರಂಜಕವನ್ನು ಹೊಂದಿರುವ ಇನ್ನೊಂದು ಹಣ್ಣು ಯಾವುದೆಂದರೆ ಅದು ಸೇಬು ಹಣ್ಣು. ಈ ಹಣ್ಣು ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ಫೈಬರ್ ಅನ್ನು ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!