ಜನಸ್ಪಂದನ ನ್ಯೂಸ್, ಬೆಂಗಳೂರು : ಎಸ್ಯುವಿ ವಾಹನವೊಂದು ವೇಗವಾಗಿ (speed) ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರಿಗೆ ಗುದ್ದಿ ಹೋಗಿದ್ದು, ಅವರಿಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ (Rae Bareli, Uttar Pradesh) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Special news : ನೀವು ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!
ಬೈಕ್ ಸವಾರರು ಸೂರ್ಯ ಮತ್ತು ಆತನ ಸ್ನೇಹಿತ ಗುರು ಶರಣ್ ಎಂದು ವರದಿಯಾಗಿದ್ದು, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (The video went viral on social media) ಆಗಿದೆ.
ರಾಯ್ಬರೇಲಿಯ ಲಕ್ನೋ- ಪ್ರಯಾಗ್ರಾಜ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಂಚಹಾರ್ ಮಾರ್ಕೆಟ್ ಏರಿಯಾದಲ್ಲಿ (Unchahar Market Area on Lucknow- Prayagraj National Highway) ಈ ಘಟನೆ ನಡೆದಿದೆ.
ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!
ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಕಾರನ್ನು ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದು (Decorated with flower garlands), ಮದುವೆಗೆ ವರನನ್ನು ಕರೆದುಕೊಂಡು ಹೋಗಲು ತೆರಳುವಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬೈಕ್ನಲ್ಲಿದ್ದ ಇಬ್ಬರು ಮಾರುಕಟ್ಟೆಯ ರಸ್ತೆ ಬದಿಯ ಅಂಗಡಿಯಲ್ಲಿ ಜ್ಯೂಸ್ ಕುಡಿಯಲು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಎಸ್ಯುವಿ ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸುಮಾರು 15 ಅಡಿ ದೂರಕ್ಕೆ ಎಸೆಯಲ್ಪಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಯಾವುದೇ ಸಾವು- ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಘಟನೆಯ ಬಳಿಕ ಕಾರು ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ (car driver disappeared from the spot). ನಂತರ ಕಾರು ಚಸಲಕ ಹನುಮಾನ್ ದೇವಾಲಯದ ಬಳಿ ಮತ್ತೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ವಿಡಿಯೋ ನೋಡಿ :
F$:;k sh:$:k bru,😳🙆🏻 what's going on here you can see that the driver is very expert and badly deliberately, he wanted to kill the bikers.
https://t.co/uiTlhfwib0— Sãñt yãdãv (@sby1002sky) March 3, 2025
ಹಿಂದಿನ ಸುದ್ದಿ : ನಿಮ್ಮ ಹುಟ್ಟಿದ ತಿಂಗಳು ಯಾವ್ದು.? ನಿಮ್ಮ ಗುಣದ ಬಗ್ಗೆ ತಿಳಿದುಕೊಳ್ಳಿ.!
ಜನಸ್ಪಂದನ ನ್ಯೂಸ್, ವಿಶೇಷ : ಸಂಖ್ಯಾಶಾಸ್ತ್ರದಲ್ಲಿ (Numerology) ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯ. ಇವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ .
ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ (Financial status, family life) ಹೀಗೆ ಎಲ್ಲವು ಇದರಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ. ಹಾಗಾದರೆ ನಿಮ್ಮ ಹುಟ್ಟಿದ ತಿಂಗಳು, ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.
ಇದನ್ನು ಓದಿ : ಯುವಕನನ್ನು ಸೆಕ್ಸ್ಗೆ ಬಳಸಿಕೊಂಡು ಮೋಸ ಮಾಡಿದ್ರಾ CISF ಮಹಿಳಾ ಅಧಿಕಾರಿ.?
ಜನವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಯಾವುದಕ್ಕೂ ಹೆದರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು (decision and opinion) ಬೇರೆಯವರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲವಂತೆ. ನಾಯಕತ್ವ ಗುಣಗಳನ್ನು (Leadership qualities) ಈ ವ್ಯಕ್ತಿ ಹೊಂದಿರುತ್ತಾರೆ.
ಫೆಬ್ರವರಿ :
ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಯು ಸ್ವತಂತ್ರ ಜೀವನದ ಕನಸು (Dream of independent life) ಕಾಣುತ್ತಾರೆ. ಇವರು ಸಾಹಸಮಯ ಜೀವನ ಇಷ್ಟಪಡುತ್ತಾರೆ. ಅಲ್ಲದೇ ಹೆಚ್ಚು ನಿಷ್ಠಾವಂತರಾಗಿದ್ದು (faithful), ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತದೆ.
ಇದನ್ನು ಓದಿ : ನೀವು Filter ನೀರು ಕುಡಿಯುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.!
ಮಾರ್ಚ್ :
ಮಾರ್ಚ್ನಲ್ಲಿ ಜನಿಸಿದರೆ ವ್ಯಕ್ತಿಗಳು ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು (Artistic qualities) ಹೊಂದಿರುತ್ತಾರೆ. ಭಾವನೆಗಳಿಗೆ ಹೆಚ್ಚು ಒತ್ತು ನೀಡಿ, ಎಲ್ಲರಿಗೂ ಒಳಿತು ಬಯಸುವ ಮಂದಿ ಆಗಿರುತ್ತಾರೆ. ಶಾಂತಿ ಪ್ರಿಯರು, ಸಹಾನುಭೂತಿ ಗುಣ (Peace loving, compassionate nature) ಹೊಂದಿರುತ್ತಾರೆ.
ಏಪ್ರಿಲ್ :
ಈ ತಿಂಗಳಲ್ಲಿ ಜನಿಸಿದವರು ತುಂಬಾನೆ ಬಲಶಾಲಿಗಳು, ಮೇಲ್ನೋಟಕ್ಕೆ (Apparently) ಕಾಣುವುದಕ್ಕಿಂತ ತುಂಬಾನೆ ದೃಢಶಾಲಿಗಳು (strong) ಆಗಿರುತ್ತಾರೆ. ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೆ ಜಯಿಸುವ ಮನೋಭಾವದವರಾಗಿದ್ದು, ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ವ್ಯಕ್ತಿಯಾಗಿರುತ್ತಾರೆ ಇವರು.
ಇದನ್ನು ಓದಿ : SSLC ಪಾಸ್ ಆಗಿದ್ರೆ ಸಾಕು : ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ; ಇಲ್ಲಿದೆ ಮಾಹಿತಿ.!
ಮೇ :
ಮೇ ತಿಂಗಳಲ್ಲಿ ಜನಿಸಿದವರಲ್ಲಿ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಇವರಿಗೆ ಹೆಚ್ಚು ಸ್ನೇಹಿತರ ಬಳಗವೇ (group of friends) ಇರುತ್ತದೆ. ಯಾವಾಗಲು ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು ಇವರು. ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ (self- confidence) ಕಳೆದುಕೊಳ್ಳದ ಜನರಾಗಿರುತ್ತಾರೆ.
ಜೂನ್ :
ಈ ತಿಂಗಳಿನಲ್ಲಿ ಜನಿಸಿದವರು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತಾರೆ (An emotional being). ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲ ಸಮಯದಲ್ಲೂ ಧನಾತ್ಮಕ ವಿಚಾರಗಳ (Positive thoughts) ಕುರಿತು ಯೋಚಿಸುತ್ತಾರೆ.
ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!
ಜುಲೈ :
ಜುಲೈನಲ್ಲಿ ಜನಿಸಿದ ವ್ಯಕ್ತಿಗಳು ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತಿಯಿಂದ (peaceful) ಎಲ್ಲವನ್ನು ನಿಭಾಯಿಸುವ ಗುಣ ಹೊಂದಿರುತ್ತಾರೆ. ಇವರು ಕುಟುಂಬಕ್ಕಾಗಿ ಯಾವ ರೀತಿಯ ಕಷ್ಟಗಳನ್ನು ಕೂಡ ಎದುರಿಸುವ ಮನಸ್ಸು ಉಳ್ಳವರು.
ಆಗಸ್ಟ್ :
ಆಗಸ್ಟ್ನಲ್ಲಿ ಜನಿಸಿದ ವ್ಯಕ್ತಿ ಎಲ್ಲರನ್ನು ಪ್ರೀತಿಸುವ ಗುಣಗಳ ಹೊಂದಿರುತ್ತಾರೆ. ಇವರು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು (More inclined towards spirituality) ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ಮಂದಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಇವರು ಹೊಂದಿರುತ್ತಾರೆ. ಹಿರಿಯರಿಗೆ, ಪ್ರೀತಿ ಪಾತ್ರರಲ್ಲಿ ವಿನಯದಿಂದ (Sincerely) ನಡೆದುಕೊಳ್ಳುವ ಗುಣ ಹೊಂದಿರುತ್ತಾರೆ.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಸೆಪ್ಟೆಂಬರ್ :
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಜನರು ಆಲೋಚನೆಗಳನ್ನು ದೃಢವಾಗಿ ನಂಬುವ ಗುಣದವರು. ಬೇರೆಯವರ ಮಾತಿಗಿಂತ ಅವರ ಮೇಲೆ ಅವರಿಗೆ ನಂಬಿಕೆ ಹೆಚ್ಚಾಗಿರುತ್ತದೆ (They trust their words more than anyone else’s words).
ಅಕ್ಟೋಬರ್ :
ಅಕ್ಟೋಬರ್ನಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಪ್ರಮಾಣಿಕರು, ಬುದ್ಧಿವಂತರು, ಗುರಿ ಕಡೆಗೆ ಯಾವಾಗಲು ಯೋಚಿಸುವವರು (Conscientious, intelligent, always thinking towards the goal). ಇವರೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ಯಾವಾಗಲು ಮುಂದಾಗಿರುತ್ತಾರೆ.
ಇದನ್ನು ಓದಿ : ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ : ವಜ್ರವನ್ನೇ ಕದ್ದೊಯ್ದ ಇರುವೆ, Video Viral.!
ನವೆಂಬರ್ :
ನವೆಂಬರ್ನಲ್ಲಿ ಜನಿಸಿದವರು ಕುಟುಂಬಕ್ಕಾಗಿ ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುತ್ತಾರೆ. ಯಾರನ್ನಾದರೂ ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವ ಗುಣ ಹೊಂದಿರುತ್ತಾರೆ. ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ (More faith in charity) ಇಟ್ಟಿದ್ದು ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ.
ಡಿಸೆಂಬರ್ :
ಡಿಸೆಂಬರ್ ತಿಂಗಳಲ್ಲಿ ಜನಿಸಿದ ಜನರು ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ (Employment sector and financial status) ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಯಾವುದೇ ವಿಚಾರದ ಬಗ್ಗೆ ಮಾತನಾಡಲು, ಕೆಲಸ ಮಾಡಲು ಹಿಂಜರಿಯುವುದಿಲ್ಲ ಇವರು. ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಕೂಡ ತೆಗೆದುಕೊಳ್ಳುತ್ತಾರೆ.