ಜನಸ್ಪಂದನ ನ್ಯೂಸ್, ನೌಕರಿ : ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಬಾಲಕಿಯರ ಸೈನಿಕ ಶಾಲೆ, ಕಿತ್ತೂರು, ಬೆಳಗಾವಿ ಜಿಲ್ಲೆಯ ವತಿಯಿಂದ ಹೊಸ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಾರ್ಡನ್, ಟಿಜಿಟಿ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಆಫ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಚೆ ಇರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ವಿದ್ಯಾರ್ಹತೆ & ಮುಂತಾದ ಷರತ್ತುಗಳನ್ನು ಪೂರೈಸಿರಬೇಕು. ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಲು 21-04-2024ನೇ ತಾರೀಖು ಕೊನೆಯ ದಿನಾಂಕವಾಗಿದೆ. ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಇಲ್ಲಿ ನೀಡಲಾಗಿರುವ ಅಧಿಕೃತ ಲಿಂಕ್ಗಳನ್ನು ಪರಿಶೀಲಿಸಿ ಮತ್ತು ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.
ಇದನ್ನು ಓದಿ : Call girl ಬೇಕಿದ್ದರೆ ಸಂಪರ್ಕಿಸಿ ಅಂತ ಪತ್ನಿಯ ಪೋಟೋ, ನಂಬರ್ ಹಾಕಿದ ವ್ಯಕ್ತಿ.!
ಹುದ್ದೆಗಳ ವಿವರವನ್ನು ಗಮನಿಸಿ :
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
TGT ಶಿಕ್ಷಕರು (ಇಂಗ್ಲೀಷ್, ಗಣಿತ & ಹಿಂದಿ) | 03 ಹುದ್ದೆಗಳು |
ಮಹಿಳಾ ಸೈಕೊಲಾಜಿಸ್ಟ್ & ಕೌನ್ಸಲರ್ | 01 |
ವೆಸ್ಟರ್ನ್ ಮ್ಯೂಸಿಕ್ ಟೀಚರ್ | 01 |
ದೈಹಿಕ ಶಿಕ್ಷಕರು | 01 |
ವಾರ್ಡನ್ | 01 |
ಹಾರ್ಸ್ ಟೀಚರ್ | 01 |
ವೇತನ ಶ್ರೇಣಿ :
ಹುದ್ದೆಯ ಹೆಸರು : | ಕ್ರೂಢಿಕೃತ ವೇತನ |
TGT ಶಿಕ್ಷಕರು (ಇಂಗ್ಲೀಷ್, ಗಣಿತ & ಹಿಂದಿ) : | 9300-34800 |
ಮಹಿಳಾ ಸೈಕೊಲಾಜಿಸ್ಟ್ & ಕೌನ್ಸಲರ್ : | ವಿದ್ಯಾರ್ಹತೆ & ಅನುಭವದ ಆಧಾರದ ಮೇಲೆ ವೇತನ |
ವೆಸ್ಟರ್ನ್ ಮ್ಯೂಸಿಕ್ ಟೀಚರ್ : | ವಿದ್ಯಾರ್ಹತೆ & ಅನುಭವದ ಆಧಾರದ ಮೇಲೆ ವೇತನ |
ದೈಹಿಕ ಶಿಕ್ಷಕರು : | 9300-34800 |
ವಾರ್ಡನ್ : | 8000 |
ಹಾರ್ಸ್ ಟೀಚರ್ : | ವಿದ್ಯಾರ್ಹತೆ & ಅನುಭವದ ಆಧಾರದ ಮೇಲೆ ವೇತನ |
ಇದನ್ನು ಓದಿ : ಹಾವು-ಮುಂಗುಸಿ ಬದ್ಧವೈರಿಗಳಾಗಲು ಕಾರಣವೇನು.? ; ಹಾವು-ಮುಂಗುಸಿ ಕಾದಾಟದ Video ನೋಡಿ.!
ವಿದ್ಯಾರ್ಹತೆ :
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸಂಬಂಧಿಸಿದ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಮುಗಿಸಿರಬೇಕು & ಅನುಭವವನ್ನು ಹೊಂದಿರಬೇಕು.
ವಯೋಮಿತಿ :
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ತುಂಬಿರಬೇಕು & ಗರಿಷ್ಟ ಅಂದರೇ 45 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕ :
ಅರ್ಹ & ಆಸಕ್ತ ಅಭ್ಯರ್ಥಿಗಳು ಎಲ್ಲ ಅಗತ್ಯ ದಾಖಲೆಗಳು & ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ 21-04-2024 ರ ಒಳಗಾಗಿ ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಪೋಸ್ಟ್ ಮುಖಾಂತರ ಅರ್ಜಿ ಕಳುಹಿಸಬೇಕು ಅಥವಾ ಸ್ಕ್ಯಾನ್ ಮಾಡಿ ಪಿಡಿಎಫ್ ರೂಪದಲ್ಲಿ sainikschoolkittur@gmail.com ಗೆ ಕಳುಹಿಸಬೇಕು.
ಅಧಿಕೃತ ಲಿಂಕ್ :
Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.
ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.