ಜನಸ್ಪಂದನ ನ್ಯೂಸ್, ಡೆಸ್ಕ್ : ಫೇಮಸ್ ಆಗಲು ಕೆಲವೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ (social media) ಏನೇನೊ ರೀಲ್ಸ್ ಮಾಡುತ್ತಾರೆ. ಹೀಗೆ ರೀಲ್ಸ್ ಹುಚ್ಚು ಇರುವವರು ವಿಭಿನ್ನವಾಗಿ ತಾವು ಫೇಮಸ್ ಆಗಲೆಂದು ಚಿತ್ರವಿಚಿತ್ರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಸದ್ಯ ಇಂತದ್ದೊಂದು ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ (It is up for debate).
ಇದನ್ನು ಓದಿ : ಫೋನ್ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವ್ಯಕ್ತಿಯೊಬ್ಬ ಜೀವಂತವಾಗಿರುವ ದೊಡ್ಡ ಮೀನನ್ನು (The largest living fish) ಕೈಯಲ್ಲಿ ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವ್ಯಕ್ತಿ ಮೀನನ್ನು ಸ್ವಲ್ಪ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ.
ಬಳಿಕ ಆತ ಬಿಯರ್ ಬಾಟಲಿಯನ್ನು ಮೀನಿನ ಬಾಯಿಯತ್ತ ಒಯ್ಯುತ್ತಾನೆ (He carries the beer bottle to the fish’s mouth). ಅಲ್ಲದೇ ಬಿಯರ್ ಅನ್ನು ಮೀನಿಗೆ ಕುಡಿಸುವುದನ್ನು ಕಾಣಬಹುದು.
ಇದನ್ನು ಓದಿ : ಸೆಲ್ಪಿ ನೆಪದಲ್ಲಿ ನಟಿಗೆ Kiss ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!
ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು, ಮೀನನ್ನು ಕಿಂಗ್ಫಿಷರ್ ಎಂದು ತಮಾಷೆ ಮಾಡಿದರೆ, ಮತ್ತೆ ಕೆಲವರು ಈ ಕೃತ್ಯವನ್ನು ಪ್ರಾಣಿಗಳ ಮೇಲಿನ ದೌರ್ಜನ್ಯ (Cruelty to animals) ಎಂದು ಟೀಕಿಸಿದ್ದಾರೆ.
ವಿಡಿಯೋ ಇಲ್ಲಿದೆ :
View this post on Instagram
ಹಿಂದಿನ ಸುದ್ದಿ : ಸರ್ಕಾರದಿಂದ ಪ್ರತಿ ತಿಂಗಳು ರೂ.3,000 Pension ಹೇಗೆ ಪಡೆಯುವುದು ಗೊತ್ತೇ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ (Pradhan Mantri Shram Yogi Maan-dhan (PM-SYM)) ಯೋಜನೆ ಭಾರತದ ಅಸಂಘಟಿತ ಕಾರ್ಮಿಕ (Unorganized labor) ವರ್ಗದವರಿಗಾಗಿ ವಿನ್ಯಾಸಗೊಳಿಸಲಾದ ಪ್ರಮುಖ ಪಿಂಚಣಿ ಯೋಜನೆಯಾಗಿದೆ.
ಕೇಂದ್ರ ಸರ್ಕಾರದ (Central government) ಈ ಮಹತ್ವಾಕಾಂಕ್ಷಿ ಯೋಜನೆಯು ಪ್ರತಿಯೊಬ್ಬ ಕಾರ್ಮಿಕನಿಗೂ ವೃದ್ಧಾಪ್ಯದ ಆರ್ಥಿಕ ಭದ್ರತೆ ನೀಡುವ ಗುರಿಯನ್ನು ಹೊಂದಿದೆ. ದೇಶದ ದೊಡ್ಡ ಸಂಖ್ಯೆಯ ಅಸಂಘಟಿತ ಕಾರ್ಮಿಕರು ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗದಂತೆ, ಸರ್ಕಾರವು ಮಾದರಿಯ ಪರಿಹಾರವಾಗಿ ಈ ಪಿಂಚಣಿ ಯೋಜನೆಯನ್ನು (Pension scheme) ಪರಿಚಯಿಸಿದೆ.
ಇದನ್ನು ಓದಿ : Belagavi : ಮತ್ತೆ ಮರಾಠಿ ಪುಂಡರ ಉದ್ಧಟತನ ; ಕರವೇ ಉಪಾಧ್ಯಕ್ಷನ ಮೇಲೆ ಹಲ್ಲೆ.!
ಆಟೋ-ಡೆಬಿಟ್ ಪಾವತಿ ವ್ಯವಸ್ಥೆ/Auto Debit Payment system :
ನೋಂದಾಯಿತ ಕಾರ್ಮಿಕರು ನಿರ್ದಿಷ್ಟ ವಯಸ್ಸಿನವರೆಗೆ ಮಾಸಿಕ ಪಾವತಿಯನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಮೂಲಕ ಅನುಷ್ಠಾನಗೊಳಿಸಬಹುದು.
ಕುಟುಂಬ ಭದ್ರತೆ/Family safety :
ಫಲಾನುಭವಿಯ ನಿಧನದ ಸಂದರ್ಭದಲ್ಲಿ, ಪತ್ನಿ ಅಥವಾ ಕುಟುಂಬದ ಸದಸ್ಯರು ಯೋಜನೆಯನ್ನು ಮುಂದುವರಿಸಬಹುದು ಅಥವಾ ಠೇವಣಿಯೊಂದಿಗೆ ಬಡ್ಡಿ ಮೊತ್ತವನ್ನು ಪಡೆಯಬಹುದು.
ಇದನ್ನು ಓದಿ : ಅ*ಚಾರ ದೂರು ಕೊಡಲು ಬಂದ ಅಪ್ರಾಪ್ತೆ ಮೇಲೆ ರೇ* ಮಾಡಿದ ಕಾನ್ಸ್ಟೇಬಲ್.!
ಅರ್ಹತೆ/Qualification) :
- ಅರ್ಜಿದಾರರ ವಯಸ್ಸು 18 ರಿಂದ 40 ವರ್ಷಗಳ ಮಧ್ಯದಲ್ಲಿರಬೇಕು.
- ಮಾಸಿಕ ಆದಾಯ ರೂ.15,000ಕ್ಕಿಂತ ಕಡಿಮೆ ಇರಬೇಕು.
- EPF, NPS ಅಥವಾ ESIC ಸದಸ್ಯರಾಗಿರಬಾರದು.
- ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
ನೋಂದಣಿ/Registration :
- ಅರ್ಜಿದಾರರು ತಮ್ಮ ಸಮೀಪದ ಕಾಮನ್ ಸರ್ವೀಸ್ ಸೆಂಟರ್ (Common Service Centre) ಗೆ ಭೇಟಿ ನೀಡಬೇಕು.
- ನೋಂದಣಿಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕು.
- ನೋಂದಾಯಿತ ಹಂತದಲ್ಲಿ ಆರಂಭಿಕ ಠೇವಣಿ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬೇಕು.
- ಭವಿಷ್ಯದಲ್ಲಿ ಪಾವತಿಗಳನ್ನು ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ (Auto debit) ಮಾಡಿಕೊಳ್ಳಬಹುದು.
ಲಾಭಗಳು/Facilities :
- ವೃದ್ಧಾಪ್ಯದಲ್ಲಿ ಸ್ಥಿರ ಆದಾಯ.
- ಆರ್ಥಿಕ ಸುರಕ್ಷತೆ ಮತ್ತು ಕುಟುಂಬ ಭದ್ರತೆ.
- ಸರಳ ನೋಂದಣಿ ಪ್ರಕ್ರಿಯೆ.
- ಗಮನಾರ್ಹ ಯೋಜನಾ ನಿರ್ವಹಣೆ LIC ಮುಖಾಂತರವಾಗುತ್ತದೆ.
ಇದನ್ನು ಓದಿ : ಫೋನ್ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
- ಯೋಜನೆಗೆ ಸೇರಲು ಅರ್ಹತೆಗಳು/Eligibility for joining the scheme :
- 18 ರಿಂದ 40 ವರ್ಷದೊಳಗಾಗಿರಬೇಕು.
- ಅವರ ಮಾಸಿಕ ಆದಾಯ ರೂ.15,000/ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
- ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ಪಿ.ಎಫ್/ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.
- ಯೋಜನೆ ನೋಂದಣಿ ವಿಧಾನಗಳು/Scheme Registration Procedures :
- ಅರ್ಹ ಫಲಾನುಭವಿಗಳು ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (C.S.C)” ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ESI. ಕಾರ್ಪೋರೇಷನ್, ಹಾಗೂ ಭವಿಷ್ಯನಿಧಿ ಇಲಾಖೆ ಹಾಗೂ ಅವರ ವೆಬ್ ವಿಳಾಸಗಳು ಹಾಗೂ ವೆಬ್ ವಿಳಾಸ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ.
- ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಐ.ಎಫ್.ಎಸ್.ಸಿ ಕೋಡ್ (Aadhar card, bank account IFSC code) ವಿವರಗಳೊಂದಿಗೆ (Bank passbook/cheque book/bank statement) ಮತ್ತು ಮೊಬೈಲ್ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್ಗಳಿಗೆ ತೆರಳುವುದು.
- ಅನುಬಂದಲ್ಲಿ ತಿಳಿಸಿರುವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಲು ತೆರಳುವುದು. ತದ ನಂತರ ಮಾಸಿಕ ವಂತಿಕೆ (Monthly contribution) ಯನ್ನು ಅವರ ಖಾತೆಯಿಂದ ಆಟೋ-ಡೆಬಿಟ್ (Auto-debit) ಮಾಡಲಾಗುವುದು.
- ಯೋಜನೆಯ ಸೌಲಭ್ಯಗಳು/Project Facilities :
- ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸುತ್ತದೆ.
- 60 ವರ್ಷ ಪೂರ್ಣಗೊಂಡ ನಂತರ ಚಂದಾದಾರರು (The beneficiary) ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
- ಪಿಂಚಣಿ ಆರಂಭಗೊಂಡ ನಂತರ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ/ಪತಿ ಪಿಂಚಣಿಯ ಶೆ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರು.
- ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅವನು/ ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ.