Monday, March 17, 2025
HomeViral Videoರೂ.500 ಕೊಟ್ಟ ಯೂಟ್ಯೂಬರ್ ; 'ನಾನು ವ್ಯಾಪಾರಿ, ಭಿಕ್ಷುಕನಲ್ಲ' ಎಂದ ಹಪ್ಪಳ ಮಾರುವ ಹುಡುಗ.!
spot_img
spot_img
spot_img
spot_img
spot_img

ರೂ.500 ಕೊಟ್ಟ ಯೂಟ್ಯೂಬರ್ ; ‘ನಾನು ವ್ಯಾಪಾರಿ, ಭಿಕ್ಷುಕನಲ್ಲ’ ಎಂದ ಹಪ್ಪಳ ಮಾರುವ ಹುಡುಗ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಡು ಬಡತನದಲ್ಲಿ ಹುಟ್ಟಿದ ಕೆಲವು ಚಿಕ್ಕ ಮಕ್ಕಳು ಹೊಟ್ಟೆಪಾಡಿಗಾಗಿ ರಸ್ತೆ, ರೈಲು ನಿಲ್ದಾಣ, ಪಾರ್ಕ್, ಟ್ರಾಫಿಕ್ ಸಿಗ್ನಲ್, ಜಾತ್ರೆ, ಸಂತೆ, ಜನನಿಬಿಡ ಪ್ರದೇಶಗಳಲ್ಲಿ ಕೆಲವು ಚಿಕ್ಕಪುಟ್ಟ ವಸ್ತುಗಳನ್ನು ಹಿಡಿದು ಮಾರಾಟ ಮಾಡುತ್ತಿರುವುದನ್ನು ನೋಡಿರುತ್ತೇವೆ.

ಈ ಮಕ್ಕಳು ಹೂವು, ಹಣ್ಣು, ಚಿಕ್ಕಪುಟ್ಟ ಆಟಿಕೆ ಸಾಮಾನುಗಳು, ಪೆನ್ನು, ಪ್ಲಾಸ್ಟಿಕ್ ಸಾಮಗ್ರಿ, ಟೈಂಪಾಸ್ ತಿನಿಸುಗಳು, ಗೊಂಬೆ, ಮಿಠಾಯಿ, ಟೀ -ಕಾಫಿಯನ್ನು ಮಾರಾಟ (sale) ಮಾಡುತ್ತಿರುತ್ತಾರೆ.

ಇದನ್ನು ಓದಿ : “ಕೋಚಿಂಗ್ ಗುರು” ಫೆಬ್ರವರಿ 1 ಮತ್ತು 2 ರಂದು ನ್ಯೂಸ್​​ಫಸ್ಟ್​​ನಿಂದ ಮೆಗಾ Coaching Expo ಆಯೋಜನೆ.!

ಈ ಕೆಲಸ ಮಾಡುವ ಸ್ವಾಭಿಮಾನಿ ಬಾಲಕನ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಯೂಟ್ಯೂಬರ್ ಬಾಲಕನಿಗೆ ಹಣವನ್ನು ಕೊಟ್ಟು ಪೇಚಿಗೆ ಸಿಲುಕು ಮರ್ಯಾದೆ (courtesy) ಕಳೆದುಕೊಂಡಿದ್ದಾರೆ ಎನ್ನಬಹುದು.

ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!

ಯೂಟ್ಯೂಬರ್ ತಾನು ವಿಡಿಯೋ ಮಾಡುತ್ತಾ ಹಪ್ಪಳ ಮಾರಾಟ ಮಾಡುತ್ತಿದ್ದ ಹುಡುಗನ (He was selling paapad) ಬಳಿ ಹೋಗಿ ಹಪ್ಪಳ ಕೊಂಡುಕೊಂಡಿದ್ದಾರೆ. ತಾನು ದಾನ ಮಾಡುವ ವ್ಯಕ್ತಿ ಎಂದು ತೋರಿಸಿಕೊಳ್ಳಲು ಒಂದು ಹಪ್ಪಳದ ಪ್ಯಾಕೆಟ್ ಪಡೆದು ಅದಕ್ಕೆ 500 ರೂ. ಹಣವನ್ನು ಬಾಲಕನಿಗೆ ಕೊಡಲು ಮುಂದಾಗಿದ್ದಾರೆ.

ಆದರೆ, ಆ ಬಾಲಕ ತುಂಬಾ ಸ್ವಾಭಿಮಾನಿ (self -respecting). ನಾನು ಹಪ್ಪಳ ಮಾರಾಟ ಮಾಡುವ ಕೆಲಸ ಮಾಡುವವನು ಭಿಕ್ಷೆ ಬೇಡುವವನಲ್ಲ ಎಂದು ಹೇಳಿದ್ದಾನೆ.

ಇದನ್ನು ಓದಿ : Belagavi : ಪ್ರತ್ಯೇಕ ಅಪ*ಘಾತ ; ತಹಶೀಲ್ದಾರ ಆಫೀಸ್ ಸಿಬ್ಬಂದಿ ಸೇರಿ ಮೂವರ ಸಾ*ವು.!

ಯುವ್‌ನಿಕ್ ವೈರಲ್ ಟ್ರಸ್ಟ್ (YouNick Viral Trust) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಆಗ ಯೂಟ್ಯೂಬರ್ ನಾನು ನಿನಗೆ ಭಿಕ್ಷೆ ನೀಡುತ್ತಿಲ್ಲ, ಬದಲಿಗೆ ಖುಷಿಯಿಂದ, ಮಾನವೀಯತೆ ದೃಷ್ಟಿಯಿಂದ ಹಣ ಕೊಡುತ್ತಿದ್ದೇನೆ. ಈ ಹಣ ನಿಮ್ಮ ತಾಯಿಯ ಕಷ್ಟಕ್ಕೆ ನೆರವಾಗಬಹುದು ಎಂದು ಒತ್ತಾಯ ಮಾಡುತ್ತಾನೆ. ಆಗ ಬಾಲಕ 500 ರೂಪಾಯಿ ತೆಗೆದುಕೊಳ್ಳುತ್ತಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ ವೈರಲ್ ಆಗಿದ್ದು, 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಸ್ವಾಭಿಮಾನಿ ಬಾಲಕನ ವೈರಲ್ ವಿಡಿಯೋ ನೋಡಿ :

ಹಿಂದಿನ ಸುದ್ದಿ : ಸರ್ಕಾರಿ ನೌಕರಿ ಸಿಗುತ್ತಿದಂತೆಯೇ ಕಷ್ಟಪಟ್ಟು ಓದಿಸಿದ ಪತಿ ಬಿಟ್ಟು ಪತ್ನಿ ಎಸ್ಕೇಪ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಗಂಡ ; ಏನದು ಗೊತ್ತಾ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ಯೋತಿ ಮೌರ್ಯ ಪ್ರಕರಣ ಬಹಳಷ್ಟು ಜನರಿಗೆ ಗೊತ್ತಿರಬಹುದು. ಕಷ್ಟ ಪಟ್ಟು ಓದಿಸಿದ (He studied hard) ಗಂಡನನ್ನು ಬಿಟ್ಟು ಪತ್ನಿ ಜ್ಯೋತಿ ಬೇರೊಬ್ಬನನ್ನು ಮದುವೆಯಾದ ಘಟನೆ ಇದು.

ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!

ಫ್ಯೂನ್ ಆಗಿದ್ದ ಗಂಡ, ಜ್ಯೋತಿಗೆ ಉನ್ನತ ಶಿಕ್ಷಣ ಕೊಡಿಸಿದ, ಅದು ತುಂಬಾ ಕಷ್ಟಪಟ್ಟು. ಆದರೆ ಪತ್ನಿ ಜ್ಯೋತಿ ಗಂಡನನ್ನು ಬಿಟ್ಟು ಸರ್ಕಾರಿ ನೌಕರಿ ಸಿಕ್ಕ ನಂತರ ಬೇರೆ ಪುರುಷನನ್ನು ಮದುವೆಯಾದಳು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಇಂತದ್ದೆ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟು ಹೆಂಡತಿಗೆ ಭರ್ಜರಿ ಶಾಕ್ ನೀಡಿದ್ದಾನೆ.

ಇದನ್ನು ಓದಿ : ಬಸ್‌ನಿಂದ ತಲೆ ಹೊರಹಾಕಿದ ಮಹಿಳೆ ; Lorry ಡಿಕ್ಕಿಯಾಗಿ ದೇಹದಿಂದ ‌ಬೇರ್ಪಟ್ಟ ರುಂಡ.!

ಗಂಡನ ಸಹಾಯ ಮತ್ತು ಸಹಕಾರದಿಂದ ಓದಿ ಉದ್ಯೋಗ (job) ಗಿಟ್ಟಿಸಿದ್ದ ಪತ್ನಿ ಉದ್ಯೋಗ ದೊರೆತ ಬಳಿಕ ಪತಿಯನ್ನೇ ತೊರೆದಿದ್ದು, ಆಕೆ ಮಾಡಿದ ಕೆಲಸಕ್ಕೆ ತಕ್ಕ ಪಾಠ ಕಲಿಸಲು ಪತಿ, ಪತ್ನಿ ಮಾಡಿದ್ದ ಎಡವಟ್ಟನ್ನು ಜಗಜ್ಜಾಹಿರು ಮಾಡಿ ಆಕೆ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ತಂದಿದ್ದಾನೆ.

ಘಟನೆಯ ವಿವರ :
ಕೆಲ ವರ್ಷಗಳ ಹಿಂದೆ ರಾಜಸ್ಥಾನದ ಕೋಟಾದ (Khota of Rajasthan) ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಮದುವೆಯಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ ಇದೆ ಎಂದು ಅರಿತ ಪತಿ ಮನೀಶ್, ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಪತ್ನಿಗೆ ಉನ್ನತ ಶಿಕ್ಷಣಕ್ಕೆ (Higher education) ಕೊಡಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ ಆತ ಮಾತ್ರ ತನ್ನ ಹೆಂಡತಿಯನ್ನು ಓದಿಸಬೇಕು ಎಂಬ ಸಂಕಲ್ಪ (determination) ಮಾಡಿಕೊಂಡಿದ್ದ.

ಇದನ್ನು ಓದಿ : ಒಂದು ತಿಂಗಳು Tea ಕುಡಿಯುವುದನ್ನು ಬಿಡಬೇಕು ಅಂತ ಅನ್ಕೊಂಡಿದ್ದೀರಾ.? ಅದಕ್ಕೂ ಮುಂಚೆ ಈ ಸುದ್ದಿ ಓದಿ.

ಅದರಂತೆ ಆತನ ಕಷ್ಟಕ್ಕೆ ಪ್ರತಿಫಲವೆಂಬಂತೆ ರೈಲ್ವೆ ಪರೀಕ್ಷೆಯಲ್ಲಿ (Railway exam) ಪತ್ನಿ ಸಪ್ನಾ ಪಾಸ್ ಆದಳು. ಆಕೆಗೆ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಕೂಡ ಸಿಕ್ಕಿತು. ಆದರೆ ಕೆಲಸ ಸಿಕ್ಕ ಬಳಿಕ ಸಪ್ನಾ ಬದಲಾಗುತ್ತಾ ಹೋದಳು. ಅದರಲ್ಲೂ ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನ್ನು ಕೀಳಾಗಿ ಕಂಡು, ಕೊನೆಗೆ ಜಗಳ ಮಾಡಿಕೊಂಡು ಗಂಡನನ್ನೇ ಬಿಟ್ಟಳು.

ಸಪ್ನಾಳ ನಡೆಯಿಂದ ಸಿಟ್ಟಾಗಿದ್ದ ಗಂಡ ಮನೀಶ್ ಆಕೆಗೆ ಬುದ್ಧಿವಾದ ಹೇಳಿದರೂ, ಆತನ ಯಾವುದೇ ಸಂಧಾನಕ್ಕೂ (negotiation) ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು.

ಇದನ್ನು ಓದಿ : ಬೆಳಗಾವಿ : ವೇಶ್ಯಾವಾಟಿಕೆ ನಡೆಸುತ್ತಿದ್ದ Spa and Beauty parlour ಮೇಲೆ ಪೊಲೀಸರ ದಾಳಿ.!

ಇದರಿಂದ ಆಕ್ರೋಶಗೊಂಡ ಗಂಡ ಮನೀಶ್ ರೈಲ್ವೆ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸ ಪಡೆಯಲು ಸಾಧ್ಯವಿಲ್ಲ (sapna cannot get a job by your own talent) ಎಂದು ಆರೋಪಿಸಿ, ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳನ್ನು (Evidence) ಸಹ ತೋರಿಸಿದ್ದ.

ತನ್ನ ಪತ್ನಿ ಸಪ್ನಾ, ಇನ್ನೊಬ್ಬ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ (Railway Recruitment Board Exam) ಪಾಸ್ ಆಗಿದ್ದಾರೆ ಎಂದು ಪ್ರೂವ್ ಮಾಡಿದ.

ಇದನ್ನು ಓದಿ : All India Institute of Medical Science ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಅಂದು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ (An investigation has been initiated against all the candidates) ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ (Saurabh Jain, Senior Divisional Commercial Officer, Kota Division) ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!