ಜನಸ್ಪಂದನ ನ್ಯೂಸ್, ಡೆಸ್ಕ್ : ರಾತ್ರಿ ವೇಳೆ ಪೊಲೀಸ್ ಠಾಣೆಗೆ ಚಿರತೆಯೊಂದು ಎಂಟ್ರಿ (Entry) ಕೊಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.
ರಾತ್ರಿ ವೇಳೆ ಪೊಲೀಸ್ ಠಾಣೆಗೆ ಚಿರತೆಯ ಏಕಾಏಕಿ ಎಂಟ್ರಿ ನೋಡಿದ ಪೊಲೀಸ್ ಸಿಬ್ಬಂದಿ (Police Staff) ಗಾಬರಿಗೊಂಡಿದ್ದಾರೆ.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ತಮಿಳುನಾಡಿನ ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯೊಳಗೆ ರಾತ್ರಿ ವೇಳೆ ಚಿರತೆಯೊಂದು ನಿಧಾನವಾಗಿ ಒಳಗೆ ಪ್ರವೇಶ ಮಾಡಿದಲ್ಲದೆ ಅತ್ತಿತ್ತ ಸುತ್ತಾಡಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾ (CCTV Camera) ಸೆರೆಯಾಗಿದ್ದು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ.?
ಚಿರತೆಯೊಂದು ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ ಪ್ರವೇಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮುಖ್ಯ ದ್ವಾರದ (Mail Door) ಮೂಲಕ ಪ್ರವೇಶ ಪಡೆದಿ ಈ ಚಿರತೆ ಕೋಣೆಯೋದರಲ್ಲಿ ಹೋಗಿ ಸುತ್ತಾಡಿದೆ.
ಇದನ್ನು ಓದಿ : ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆಗೆ ಶರಣಾದ Businessman.!
ಆದರೆ ಇದೆ ವೇಳೆಯಲ್ಲಿ ಸಿಬ್ಬಂದಿಯೊಬ್ಬರು ಅದೇ ಕೋಣೆಯಲ್ಲಿದ್ದರೂ ಸಹ ಚಿರತೆಗೆ ಕಾಣಿಸಲಿಲ್ಲೋ ಅಥವಾ ನೋಡಿಯೂ ಹಾಗೇ ಸುಮ್ಮನೇ ಹೊರ ಬಂತೋ ಅನ್ನೋದು ತಿಳಿಯಲಿಲ್ಲ.
ಕೆಲ ಸಮಯದ ನಂತರ ಆ ಚಿರತೆ ತಾನ್ನಷ್ಟಕ್ಕೆ ತಾನೇ ಕೋಣೆಯಿಂದ ಹೊರ ಬಂದು ಮತ್ತೆ ಮುಖ್ಯ ದ್ವಾರದ ಮೂಲಕ ಹೊರ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಓದಿ : ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದ ವೈದ್ಯೆ ವಿರುದ್ಧ ದಾಖಲಾಯ್ತು FIR.!
ಪೊಲೀಸ್ ಠಾಣೆಯ ಮೊದಲ ಕೋಣೆಗೆ ಹೋದ ಚಿರತೆಯನ್ನು ನೋಡಿದ ಸಿಬ್ಬಂದಿ, ಚಿರತೆ ಹೊರ ಬರುತ್ತಿದಂತೆಯೇ ರೂಂ ಬಾಗಿಲು ಲಾಕ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ರೂಂ (Room) ಬಾಗಿಲು ಲಾಕ್ ಮಾಡಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಚಿರತೆ ಠಾಣೆಯಿಂದ ಹೊರ ಹೋಗಿರುವುದನ್ನು ದೃಢಪಡಿಸಿಕೊಳ್ಳಲು ಎಚ್ಚರಿಕೆಯಿಂದ ತುದಿಗಾಲಲ್ಲಿ ಸ್ವಲ್ಪ ಬಾಗಿಲನ್ನು ತೆರೆದು ಭಯಭೀತನಾಗಿ ಅಲ್ಲಿಯೇ ನಿಂತು ಇಣುಕು ನೋಡುತ್ತಾನೆ.
ಇದನ್ನು ಓದಿ : ಮಹಿಳಾ PSI ಯಿಂದ ಕಿರುಕುಳ ಆರೋಪ ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ.!
ಚಿರತೆ ಹೊರ ಹೋಗಿರುವುದು ದೃಢವಾದ ನಂತರ ತಾನಿದ್ದ ಕೋಣೆಯ ಬಾಗಿಲು ಮುಚ್ಚಿಕೊಳ್ಳುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ವಿಡಿಯೋ ಇಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಹಂಚಿಕೊಂಡಿದ್ದು, “ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯನ್ನು ಚಿರತೆಯೊಂದು ಪರಿಶೀಲಿಸಲು ನಿರ್ಧರಿಸಿತು. ಶಾಂತವಾಗಿ ಬಾಗಿಲು ಮುಚ್ಚಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಹ್ಯಾಟ್ಸ್ ಆಫ್. ಯಾರಿಗೂ ಗಾಯವಾಗಲಿಲ್ಲ. ಚಿರತೆ ಸುರಕ್ಷಿತವಾಗಿ ಕಾಡಿಗೆ ಮರಳಿತು”. (“A Leopard decided to inspect the Naduvattam Police Station in Nilgiris. Hats off to the police person on duty who calmly closed the door and called forest officials. No one was hurt. Leopard went back safely to the forest) ಎಂದು ಬರೆದು ಕೊಂಡಿದ್ದಾರೆ.
ಇದನ್ನು ಓದಿ : NPCIL ಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇನ್ನು ವಿಡಿಯೋ ನೋಡಿ ಅನೇಕರು ವಿಧ ವಿಧದಲ್ಲಿ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ :
A Leopard decided to inspect the Naduvattam Police Station in Nilgiris. Hats off to the police person on duty who calmly closed the door and called forest officials. No one was hurt. Leopard went back safely to the forest #wildlife #TNForest pic.twitter.com/WEtXgW36kI
— Supriya Sahu IAS (@supriyasahuias) April 29, 2025
ಹಿಂದಿನ ಸುದ್ದಿ : Video : ಪಾಕ್ ಸೇನಾ ಟ್ರಕ್ಗಳ ಮೇಲೆ ದಾಳಿ ; 10 ಸೈನಿಕರ ಸಾವು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಾಕ್ ಸೇನಾ ಟ್ರಕ್ಗಳು ಕ್ವೆಟ್ಟಾಗೆ (Quetta)ಬರುತ್ತಿದ್ದಂತೆಯೇ ಸ್ನೈಪರ್ ರೈಫಲ್ ಮತ್ತು ಐಇಡಿ (IED) ದಾಳಿ ಮಾಡಿದ್ದು, ಕನಿಷ್ಠ 10 ಸೈನಿಕರು ಮೃತರಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಲಾಮ್ನಲ್ಲಿ 26 ಸಾಮಾನ್ಯ ನಾಗರೀಕರ (Ordinary citizen) ನ್ನು ಹತ್ಯೆ ಮಾಡಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ (hand) ಇರುವುದು ಗೊತ್ತಾದ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಯುದ್ಧಾಂತಕ ಶುರುವಾಗಿದೆ.
ಇದನ್ನು ಓದಿ : ತಂದೆಯ Pistolನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಯುವಕ.!
ಈ ಮಧ್ಯೆ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (Balochistan Liberation Army) ಯಿಂದಲೂ ಏಟಿನ ಮೇಲೆ ಏಟು ಬೀಳುತ್ತಿದೆ. ಬಲೂಚಿಸ್ತಾನದ ಟರ್ಬತ್ ಜಿಲ್ಲೆಯ ಸ್ಯಾಟಲೈಟ್ ಪಟ್ಟಣ (satellite town) ದ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ವಾಹನ (Escort vehicle) ಗಳ ವೇಳೆ ಶುಕ್ರವಾರ ದಾಳಿ ನಡೆದಿದೆ.
ಪಹಲ್ಲಾಮ್ನಲ್ಲಿ 26 ನಾಗರಿಕರ ಹತ್ಯೆಗೆ ಭಾರತ ಈವರೆಗೂ ಪಾಕಿಸ್ತಾನದ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿಲ್ಲವಾದರೂ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮುಂದಿನ ಕ್ರಮದ ಕುರಿತಾಗಿ ಭಯ (fear) ಶುರುವಾಗಿದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಬಲೂಚ್ ಲಿಬರೇಷನ್ ಆರ್ಮಿ ಪ್ರಕಟಣೆಯಲ್ಲಿ ʼನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆ (occupying Pakistani army) ಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ನಮ್ಮ ಪ್ರತಿರೋಧದ ಚಳವಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದೆ.
ಪಾಕ್ ಸೇನಾ ಟ್ರಕ್ಗಳ ಮೇಲೆ ದಾಳಿ ಮಾಡಿದ್ದಾಗ ಅದರಲ್ಲಿದ್ದ ಎಲ್ಲ 10 ಮಂದಿ ಸೈನಿಕರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ಇದರ ವಿಡಿಯೋವನ್ನು ಕೂಡ ರಿಲೀಸ್ (Release) ಮಾಡಿದ್ದು, ಮಿಲಿಟರಿ ಟ್ರಕ್ನ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ.
ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಭಾರತದಿಂದ ದಾಳಿಗೂ ಮುನ್ನವೇ ಪಾಕಿಸ್ತಾನದ ಸೈನಿಕರಿಗೆ ಬಲೂಚ್ ಲಿಬರೇಷನ್ ಆರ್ಮಿಯ ಆತಂಕ ಶುರುವಾಗಿದೆ.