ಜನಸ್ಪಂದನ ನ್ಯೂಸ್, ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲಾಟ್ನಲ್ಲಿ ಓದಿಕೋ ಎಂದು ತಾಯಿ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕ ಸಮರ್ಥ್ ಸುರೇಶ್ ಭಜಂತ್ರಿ (14) ಎಂದು ತಿಳಿದುಬಂದಿದೆ. ಅಮ್ಮ ಸ್ಕೂಲ್ ರಜೆ ಇದೆ ಅಂತ ತುರುಗಬೇಡಾ, ಓದ್ಕೋ ಎಂದಿದ್ದಾರೆ. ಇಷ್ಟಕ್ಕೆ ಬಾಲಕ ರೂಮ್ ಬಾಗಿಲು ಹಾಕಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು ಎಂದು ತಿಳಿದುಬಂದಿದೆ. ಇದನ್ನು ಓದು : ವಿಡಿಯೋ : ಬಸ್ನಲ್ಲಿ ಸೀಟ್ಗಾಗಿ ಇಬ್ಬರು ನಾರಿಯರ ಮಧ್ಯೆ ಜಗಳ ; ಚಪ್ಪಲಿಯಿಂದ ಹೊಡೆದಾಟ.!
ದೀಪಾವಳಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ ಅಮ್ಮ ಹೇಳಿದ್ದೇ ತಪ್ಪಾಯಿತೇನೋ, ಆದರೆ ಇಷ್ಟ ಚಿಕ್ಕ ವಿಷಯಕ್ಕೆ ಬಾಲಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.