ಜನಸ್ಪಂದನ ನ್ಯೂಸ್, ಬಳ್ಳಾರಿ : ಬಳ್ಳಾರಿಯ ನಗರದ ಕೆಎಂಎಫ್ ಕಚೇರಿ (KMF office in Bellary city) ಸಮೀಪ ದೊಡ್ಡ ಕುಂಬಳಕಾಯಿ, ಕಪ್ಪು ಗೊಂಬೆ, ತೆಂಗಿನಕಾಯಿ, 8 ನಿಂಬೆ ಹಣ್ಣು, ಕುಂಕುಮ ಹಾಕಿ ಮೊಳೆ ಹೊಡೆದು ಭಯ ಹುಟ್ಟಿಸುವಂತಹ ಮಾಟಮಂತ್ರ ಮಾಡಿದ ಘಟನೆ ನಡೆದಿದೆ.
ಈ ವಾಮಾಚಾರವನ್ನು ಕಂಡು ಬಳ್ಳಾರಿ ಜನರು ಬೆಚ್ಚಿಬಿದ್ದಿದ್ದಾರೆ.
ಇಡೀ ಕೆಎಂಎಫ್ ಕಚೇರಿ ಸುತ್ತಲೂ ಅಷ್ಟೆಲ್ಲಾ ಸಿಸಿ ಕ್ಯಾಮರಾ, ಸಿಬ್ಬಂದಿ ಸರ್ಪಗಾವಲು ಮಧ್ಯೆಯೇ ಕೆಎಂಎಫ್ ಆಡಳಿತ ಕಚೇರಿ ಮುಂದೆಯೇ ವಾಮಾಚಾರ ಮಾಡಿರುವುದು ಅಚ್ಚರಿಗೆ ದೂಡಿದೆ.
ಇದನ್ನು ಓದಿ : ಹಿಮ ರಾಶಿಯಲ್ಲಿ ಸಿಕ್ಕಿಹಾಕಿಕೊಂಡ ಮುಗ್ಧ ಜಿಂಕೆ : ಮುಂದೆನಾಯ್ತು ; ಈ Video ನೋಡಿ.!
ಅಷ್ಟೆಲ್ಲಾ ಸಿಸಿ ಕ್ಯಾಮರಾಗಳ ಕಣ್ಗಾವಲು, ಭದ್ರತಾ ಸಿಬ್ಬಂದಿ ನಡುವೆ ಈ ವಾಮಾಚಾರ ಹೇಗೆ ನಡೆಯಿತು ಎಂಬುದು ಯಕ್ಷಪ್ರಶ್ನೆಯಾಗಿದೆ.
ಸಿಸಿಟಿವಿ, ಭದ್ರತಾ ಸಿಬ್ಬಂದಿ ಮಧ್ಯೆ ಹೇಗೆ? ಯಾರು? ವಾಮಾಚಾರ ಮಾಡಿದರು ಎಂಬ ಪ್ರಶ್ನೆಗಳು ಮೂಡಿವೆ.
ಹಿಂದಿನ ಸುದ್ದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಒಮ್ಮೋಮ್ಮೆ ನಾವು ಮಾಡುವ ಪುಟ್ಟ ಸಹಾಯ ಮತ್ತೋಬ್ಬರ ಜೀವನಕ್ಕೆ ನಾಂದಿ ಆಗುತ್ತದೆ ಎಂಬುವುದಕ್ಕೆ ಒಂದು ಉತ್ತಮ ಉದಾಹರಣೆ (good example) ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಒಂದು ಜಿಂಕೆ ಹಿಮ ರಾಶಿ (pile of snow) ಯಲ್ಲಿ ಸಿಕ್ಕು ಒದ್ದಾಡುತ್ತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ ಓರ್ವ ಸಹೃದಯಿ ಹಾಗೂ ಮಾನವೀಯತೆ ವ್ಯಕ್ತಿ (kind-hearted and humane person) ಆ ದೃಶ್ಯವನ್ನು ನೋಡುತ್ತಾನೆ.
ಕೂಡಲೇ ತನ್ನ ಕಾರನ್ನು ನಿಲ್ಲಿಸಿ (stopped his car) ಹೇಗಾದರು ಮಾಡಿ ಆ ಮುಕ ಮುಗ್ದ ಪ್ರಾಣಿ (innocent animal) ಯ ಜೀವವನ್ನು ರಕ್ಷಿಸಬೇಕೆಂದು ಕಾರಿನಿಂದ ಕೆಳಗೆ ಇಳಿಯುತ್ತಾನೆ. ಹಿಮ ರಾಶಿಯಲ್ಲಿ ಸಿಲುಕಿ ಒದ್ದಾಡುತ್ತಿದ ಆ ಜಿಂಕೆಯ ಹತ್ತಿರ ಬಂದು ಅದನ್ನು ಬೆದರಿಸಲು ಪ್ರಾರಂಭಿಸುತ್ತಾನೆ. ಆಗ ವ್ಯಕ್ತಿಯನ್ನು ನೋಡಿದ ಜಿಂಕೆ ಅಂಜಿ ಸ್ವಲ್ಪ (little in fear) ಮುಂದಕ್ಕೆ ಸಾಗುತ್ತದೆ. ಆದರೆ ದೊಡ್ಡ ಪ್ರಮಾಣದಲ್ಲಿರುವ ಹಿಮ ರಾಶಿಯನ್ನು ದಾಟಲು ಆ ಪುಟ್ಟ ಜಿಂಕೆಗೆ ಆಗುವುದಿಲ್ಲ.
ಇದನ್ನು ಓದಿ : ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆ*ತ್ಮಹ*ತ್ಯೆ.!
ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ, ಜಿಂಕೆಗಿಂತ ಮುಂದೆ ಸಾಗಿ ಕೊರೆಯುವ ಚಳಿಯ ಮಧ್ಯೆಯೂ ಹಿಮ ರಾಶಿಯ ನಡುವೆ ಸಣ್ಣ ಕಾಲು ದಾರಿಯನ್ನು ಮಾಡಿ ಕೊಡುವ ಮೂಲಕ ಜಿಂಕೆ ಕಾಡಿಗೆ ಸುರಕ್ಷಿತವಾಗಿ (forest safely) ತಲುಪುವಂತೆ ಮಾಡಿದ್ದಾರೆ. ಆ ಮುಗ್ದ ಜೀವಿಗೆ ಕಾಡಿನಲ್ಲಿ ಹೋಗಲು ದಾರಿ ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಸದ್ಯ ಈ ಹೃದಯಸ್ಪರ್ಶಿ (heartwarming) ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವಿಡಿಯೋ netizens ಮನ ಮುಟ್ಟುವಂತೆ ಮಾಡಿದೆ. ಮನುಷ್ಯರಾದ ನಾವೂ ದಿನನಿತ್ಯ ಜೀವನದ ಜಂಜಾಟದ ಮಧ್ಯವು ಇಂತಾ ಪುಟ್ಟ ಪುಟ್ಟ ಸಹಾಯವನ್ನು ಮಾಡುವುದರಿಂದ ನಮ್ಮ ಜೀವನದ ದಿಕ್ಕನ್ನು ಸಹ ಬದಲಾಯಿಸಿ ಬಿಡುತ್ತವೆ (change the direction of our lives).
ಇದನ್ನು ಓದಿ : Health : ಈ ಸಸ್ಯದ ಬಗ್ಗೆ ನಿಮಗೆ ಗೊತ್ತಾ.?
AMAZINGNATURE ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “This man cleared a path through deep snow to guide a deer back into the forest”. ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಜನವರಿ 20 ರಂದು ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಡಿಯೋ 2 ಮಿಲಿಯನ್ಗಿಂತ ಹೆಚ್ಚು views ಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.
ಓರ್ವ ನೆಟ್ಟಿಗರು ʼನಿಜಕ್ಕೂ ಈ ವ್ಯಕ್ತಿ ಸಹೃದಯಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ʼಮನುಷ್ಯ ಪ್ರಕೃತಿಗೆ ಒಳ್ಳೆಯದನ್ನು ಮಾಡುವುದನ್ನು ನೋಡುವುದು ಅದ್ಭುತವಾಗಿದೆʼ ಎಂಬ comment ಮಾಡಿದ್ದಾರೆ. ಇನ್ನೂ ಅನೇಕರು ಆ ವ್ಯಕ್ತಿಯ ಸಹೃಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ :
This man cleared a path through deep snow to guide a deer back into the forest. pic.twitter.com/lIPfjFXszR
— Nature is Amazing ☘️ (@AMAZlNGNATURE) January 20, 2025