Monday, March 17, 2025
HomeNewsಸಮಸ್ಯೆ ಎಂದು ಠಾಣೆಗೆ ದೂರು ಕೊಡಲು ಬಂದ ಯುವತಿ ; ಮಗು ಕೊಟ್ಟ Constable.!
spot_img
spot_img
spot_img
spot_img
spot_img

ಸಮಸ್ಯೆ ಎಂದು ಠಾಣೆಗೆ ದೂರು ಕೊಡಲು ಬಂದ ಯುವತಿ ; ಮಗು ಕೊಟ್ಟ Constable.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ದೂರು ನೀಡಲು ಬಂದ ಯುವತಿಯೊಬ್ಬಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿ, ಆಕೆಯನ್ನು​ ಗರ್ಭಿಣಿ (pregnant) ಮಾಡಿರುವ ಗಂಭೀರ ಆರೋಪ ಪೊಲೀಸ್​ ಕಾನ್ಸ್​ಟೆಬಲ್ ಓರ್ವನ ವಿರುದ್ಧ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ :
ಯುವತಿಯು ತೆಲಂಗಾಣದ ಮೆಡ್ಚಲ್‌ನ (of Medchal, Telangana) ಇಂದಿರಾನಗರ ಕಾಲನಿಯ ನಿವಾಸಿಯಾಗಿದ್ದು, ಕಳೆದ ವರ್ಷ ಮಾರ್ಚ್ 21 ರಂದು ತನ್ನ ತಾಯಿಯೊಂದಿಗೆ ಮೆಡ್ಚಲ್ ಪೊಲೀಸ್ ಠಾಣೆಗೆ ತೆರಳಿ ಕೆಲವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಳು.

ಇದನ್ನು ಓದಿ : Prayagraj ಕಾಲ್ತುಳಿದಲ್ಲಿ ಮೃತಪಟ್ಟ ತಾಯಿ -ತಂಗಿಯ ಆಭರಣ ಸುರಕ್ಷಿತವಾಗಿ ಮನೆಗೆ : ಸಹೋದರ.!

ಈ ವೇಳೆ ಡ್ಯೂಟಿಯಲ್ಲಿದ್ದ ಅಪರಾಧ ವಿಭಾಗದ ಕಾನ್ಸ್​ಟೆಬಲ್​ ಸುಧಾಕರ್ ರೆಡ್ಡಿ, ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿ (Promise to solve the problem), ಮೊಬೈಲ್ ನಂಬರ್ ನ್ನು ಆಕೆಗೆ ಕೊಟ್ಟಿದ್ದರು. ಬಳಿಕ ಯುವತಿ ತನ್ನ ಪ್ರಕರಣದ ಬಗ್ಗೆ ಕೇಳಲು ಮರುದಿನ ಕಾನ್ಸ್​ಟೆಬಲ್​ ಸುಧಾಕರ್ ರೆಡ್ಡಿಗೆ ಕಾಲ್ ಮಾಡಿದ್ದಳು. ಈ ವೇಳೆ ಆಕೆಯನ್ನು ಕಾನ್ಸ್​ಟೆಬಲ್​ ಪುಸಲಾಯಿಸಿ ತನ್ನ ಬಳಿಗೆ ಕರೆದನು ಎಂದು ವರದಿಯಿಂದ ತಿಳಿದು ಬಂದಿದೆ.

ಏನೋ ಒಂದು ನೆಪ ಹೇಳಿ ಯುವತಿಯ ಮನೆಗೆ ಹೋದ ಕಾನ್ಸ್​ಟೆಬಲ್,​ ನನಗೆ ಇನ್ನೂ ಮ್ಯಾರೇಜ್ ಆಗಿಲ್ಲ ಎಂದು ಸುಳ್ಳು ಹೇಳಿ (Lie that I am not married yet) ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನು. ಅಲ್ಲದೇ ಆಕೆಯನ್ನು ಮತ್ತೆ ತನ್ನ ಮನೆಗೆ ಕರೆಸಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ (Sexual assault) ಎಸಗಿದನು ಎ‌ಂದು ಆರೋಪಿಸಲಾಗಿದೆ.

ಇದನ್ನು ಓದಿ : ಕೃಷಿ ಅಧಿಕಾರಿ /ಸಹಾಯಕ ಕೃಷಿ ಅಧಿಕಾರಿ ಹುದ್ದೆ : ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ Update.!

ಕಳೆದ ವರ್ಷ ಜುಲೈನಲ್ಲಿ ಯುವತಿ ಗರ್ಭಿಣಿಯಾಗಿದ್ದು, ಮಗು ತೆಗೆಸಿಕೊಳ್ಳುವಂತೆ ಆತ ಒತ್ತಾಯಿಸಿದ್ದಾನೆ. ಇದಾದ ಬಳಿಕ ಆಗಸ್ಟ್ 15ರಂದು ಯುವತಿ, ಸುಧಾಕರ್ ರೆಡ್ಡಿಗೆ ಕಾಲ್ ಮಾಡಿದಾಗ, ಆತನ ಹೆಂಡತಿ ಕಾಲ್ ರಿಸೀವ್ ಮಾಡಿದ್ದಾಳೆ. ಈ ವೇಳೆ ಸುಧಾಕರ್​ನ ನಿಜ ಬಣ್ಣ ಬಯಲಾಗಿದೆ. ಬಳಿಕ ಆಕೆ ಸುಧಾಕರ್​ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.

ಇತ್ತ ಪತ್ನಿಗೂ ಸುಧಾಕರ್​​ ಮುಖವಾಡ ಗೊತ್ತಾಗಿ ಆತನೊಂದಿಗೆ ಗಲಾಟೆ ಮಾಡಿದ್ದಾಳೆ.​ ಇಷ್ಟಕ್ಕೆಲ್ಲ ಯುವತಿನೇ ಕಾರಣ ಎಂದು ಅಂದುಕೊಂಡ ಸುಧಾಕರ್,​ ಆಕೆಯ ಮನೆಗೆ ತೆರಳಿ ಫಿನೈಲ್‌ ಕುಡಿ ಅಂತ ಒತ್ತಾಯಿಸಿದ್ದಾನೆ. ಅಲ್ಲದೆ, ಯುವತಿಯನ್ನು ತನ್ನ ಮನೆಗೆ ಕರೆಸಿ ಹಲ್ಲೆ ಮಾಡಿದ್ದಾನೆ.

ಇದನ್ನು ಓದಿ : ನೀವೂ ಎಂದಾದರೂ ಭೂಮಿ ತಿರುಗುವುದನ್ನು ನೋಡಿದ್ದೀರಾ.? ಇಲ್ವಾ, ಹಾಗಾದರೆ ಈ Vedio ನೋಡಿ.!

ಇದು ಸಾಲದೇ ಸುಧಾಕರ್​, ತನ್ನೊಂದಿಗೆ ಕೆಲಸ ಮಾಡುವ ಕಾನ್ಸ್​ಟೆಬಲ್​ ಮೂಲಕ ಆಕೆಗೆ ಬೆದರಿಕೆ ಹಾಕಿದ್ದಾನೆ. ಡಿಸೆಂಬರ್ 16ರಂದು, ಯುವತಿಯನ್ನು ಬೈಕ್​ನಲ್ಲಿ ಮೇಲೆ ಕರೆದುಕೊಂಡು ಹೋಗಿ ಗಿರ್ಮಾಪುರ ಬಳಿ ಕೆಳಗೆ ತಳ್ಳಿ, ಆಕೆಗೆ ಗಂಭೀರ ಗಾಯವಾಗುವಂತೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸುಧಾಕರ್​ ವರ್ತನೆಯಿಂದ ಬೇಸತ್ತ ಸಂತ್ರಸ್ತೆ ಕೊನೆಗೆ ದೂರು ದಾಖಲಿಸಲು ನಿರ್ಧರಿಸಿದಳು. ಮೆಡ್ಚಲ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಸುಧಾಕರ್​​ನ ವಿಚಾರ ಗೊತ್ತಾಗಿ ಸೈಬರಾಬಾದ್ ಕಮಿಷನರೇಟ್‌ಗೆ ವರ್ಗಾಯಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಕಾನ್ಸ್‌ಟೇಬಲ್ ವಿರುದ್ಧ ಯುವತಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ನಲ್ಲಿ ದೂರು ದಾಖಲಿಸಿದರು. ಮೆಡ್ಚಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಧಾಕರ್ ರೆಡ್ಡಿಯನ್ನು ರಿಮಾಂಡ್‌ಗೆ ಕಳುಹಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್

ಹಿಂದಿನ ಸುದ್ದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ ಎಂದರೆ ಅದು ಕುಂಬಳಕಾಯಿ (Pumpkin). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.

ಕುಂಬಳಕಾಯಿ ಬಳಸಿ ಅಡುಗೆ ಮಾಡುವಾಗ ಬಹಳಷ್ಟು ‌ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ.

ಇದನ್ನು ಓದಿ : ಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ.

* ರಂಜಕ,‌ ಮೆಗ್ನೀಸಿಯಮ್ ಮತ್ತು ಸತುವನ್ನು (phosphorus, Magnesium and zinc) ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ ಬೀಜಗಳು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯಕವಾಗಿವೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!

* ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ (Controls hungry and weight). ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.

* ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುವುದು.

ಇದನ್ನು ಓದಿ : ವೆಸ್ಟರ್ನ್ ಉಡುಪಿನಲ್ಲಿ ಗ್ಲಾಮರಸ್ ಬೆಡಗಿಯಾದ ಮೋನಾಲಿಸಾ? ವಿಡಿಯೋ ವೈರಲ್.!

ಕುಂಬಳಕಾಯಿ ಬೀಜಗಳಲ್ಲಿನ ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.

* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.

ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್‌ ; ವಿಡಿಯೋ ವೈರಲ್.!

* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ (Work against free radicals) ಮಾಡುತ್ತವೆ.

* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

* ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ (LDL), ಉರಿಯೂತವನ್ನು ಕಡಿಮೆ ಮಾಡುತ್ತವೆ.

ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt

* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಗುಣ (Anti- inflammatory properties) ಹೊಂದಿದೆ.

* ಕುಂಬಳಕಾಯಿ ಬೀಜವು ಕಬ್ಬಿಣ, ಸೆಲೆನಿಯಂ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidant) ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ.

* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

ಇದನ್ನು ಓದಿ : Vedio : ಗಂಡನಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲು ತೆರೆದ ಪತ್ನಿಗೆ ಕಾದಿತ್ತು ಬಿಗ್ ಶಾಕ್.!

* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದಿಂದಾಗುವ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).

* ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ (Lower sugar levels) ಎನ್ನಲಾಗಿದೆ.

ಇದನ್ನು ಓದಿ : ಕುಂಭಮೇಳದಲ್ಲಿ Three ಬಾರಿ ಕಳೆದುಹೋದ ಪತ್ನಿ ಹುಡುಕಿಕೊಟ್ಟ ಪೊಲೀಸರು ; ವ್ಯವಸ್ಥೆ ಸರಿ ಇಲ್ಲ ಎಂದ ಪತಿ.!

* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ಕಬ್ಬಿಣವು ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಇನ್ನೂ ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕುಂಬಳಕಾಯಿ ಬೀಜಗಳು ಕ್ಯಾನ್ಸರ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು (positive effects) ಬೀರುತ್ತವೆ ಎಂಬ ಅಂಶವನ್ನು ಅಧ್ಯಯನಗಳು ಕಂಡು ಹಿಡಿದಿವೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!